ರಾಯಚೂರು | ಸ್ವದೇಶಿ ಉತ್ಪನ್ನಗಳನ್ನು ಬಳಸಲು ಬಿಜೆಪಿಯಿಂದ ಡಿ.25 ವರೆಗೆ ಆತ್ಮನಿರ್ಭರ ಭಾರತ ಅಭಿಯಾನ : ವೀರನಗೌಡ ಲೆಕ್ಕಿಹಾಳ
ರಾಯಚೂರು : ದೇಶದ ನಾಗರಿಕರಾದ ನಾವೆಲ್ಲರೂ ಸ್ವದೇಶಿ ಉತ್ಪನ್ನಗಳ ಬಳಕೆಗೆಮುಂದಾಗಬೇಕು. ಸಾರ್ವಜನಿಕರಿಗೆ ಸ್ವದೇಶಿ ವಸ್ತುಗಳ ಬಳಕೆಗ ಜಾಗೃತಿ ಮೂಡಿಸಲು ಸೆ.25 ರಿಂದ ಆತ್ಮನಿರ್ಭರ ಭಾರತ ಅಭಿಯಾನ ಆಯೋಜಿಸಿದೆ. ಡಿ.25 ಅಟಲ್ ಬಿಹಾರಿ ವಾಜಪೇಯಿ ಜನ್ಮದಿನವರೆಗೆ ನಡೆಯಲಿದ್ದು, ಜಿಲ್ಲಾದ್ಯಾಂತ ಜನರಲ್ಲಿ ಅರಿವು ಮೂಡಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರನಗೌಡ ಲೆಕ್ಕಿಹಾಳ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಸ್ವದೇಶಿ ಉತ್ಪನ್ನಗಳ ಬಳಕೆಗೆ ಧ್ವನಿಯಾಗಬೇಕಿದೆ. ಮನೆಗಳಲ್ಲಿ ಬಳಸುವ ವಸ್ತು ಸ್ವದೇಶಿ ಇರುವಂತೆ ಸ್ಥಳೀಯ ಉತ್ಪನ್ನ ಖರೀದಿಸಿದಾಗ ಮಾತ್ರ ಖಂಡಿತ ಬದಲಾವಣೆ ಸಾಧ್ಯ. ದೇಶ ರಕ್ಷಣೆಯ ವ್ಯವಸ್ಥೆಯಲ್ಲಿ ಸೇನೆ, ಶಸ್ತ್ರಗಳಲ್ಲಿ ಆತ್ಮ ನಿರ್ಭರ ಭಾರತವಾಗಿದೆ. ಅಭಿಯಾನದಲ್ಲಿ ಸ್ವದೇಶಿ ವಸ್ತುಗಳ ಬಳಕೆ ಕುರಿತು ಜನರಲ್ಲಿ ಅರಿವು ಮೂಡಿಸಲಾಗುವುದು. ವಿದೇಶಿ ವಸ್ತುಗಳ ಬಳಕೆ ನಿಲ್ಲಿಸಿ ಸ್ಥಳೀಯವಾಗಿ ಉತ್ಪಾದನೆಯಾಗುವ ವಸ್ತುಗಳನ್ನೇ ಬಳಸುವಂತೆ ಜಾಗೃತಿ ಮೂಡಿಸಲಾಗುವುದು. ಸ್ವದೇಶದವರೆ ನಿರ್ಮಿಸಿದ ಕುಂಬಾರರು ತಯಾರಿಸುವ ಪಣತಿಗಳನ್ನು ಬಳಸಬೇಕು ಇದರಿಂದ ಅವರಿಗೂ ಆರ್ಥಿಕವಾಗಿ ಸಬಲರಾಗುವರು ಎಂದರು.
ಆತ್ಮನಿರ್ಭರ ಭಾರತ ಅಭಿಯಾನದ ಜಿಲ್ಲಾ ಸಂಚಾಲಕ ಶಿವುಕುಮಾರ ಪಾಟೀಲ್ ಮಾತನಾಡಿ, ಆತ್ಮ ನಿರ್ಭರ ಭಾರತ ಅಭಿಯಾನವು ಸ್ವದೇಶಿ, ಸುಭಾಷಾ, ಸುಭೂಷಣ ಕುರಿತು ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಆಯಾ ಜಿಲ್ಲೆಗಳ ಉತ್ಪನ್ನಗಳ ಬಳಕೆ, ಸ್ವದೇಶಿ ವಸ್ತುಗಳನ್ನು ಬಳಸುವ ಅವಶ್ಯಕತೆಯನ್ನು ತಿಳಿಸಲಾಗುತ್ತದೆ. ಮುದ್ರಾ ಯೋಜನೆ ಸೇರಿದಂತೆ ಹಲವಾರು ಯೋಜನೆಗಳು ಆತ್ಮನಿರ್ಭರ ಯೋಜನೆಯಡಿ ಕೇಂದ್ರ ಸರಕಾರ ಜಾರಿಗೊಳಿಸಲಾಗಿದೆ. ಸ್ಥಳೀಯ ಉತ್ಪನ್ನಗಳನ್ನು ಉತ್ತೇಜಿಸುವ ಕಾರ್ಯ ಪ್ರಾರಂಭವಾಗಿದೆ ಎಂದು ಹೇಳಿದರು.
ಈ ವೇಳೆ ಆತ್ಮ ನಿರ್ಭರ ಭಾರತ ಅಭಿಯಾನದ ಜಿಲ್ಲಾ ವಕ್ತಾರ ಕೆ.ಎಂ.ಪಾಟೀಲ್ಬಿ, ಜೆ.ಪಿ.ನಗರ ಮಂಡಲ ಅಧ್ಯಕ್ಷ ರಾಘವೇಂದ್ರ ಉಳ್ಳೂರು, ಚಂದ್ರಶೇಖರ ಪಾಟೀಲ್, ಸಂತೋಷ, ರಾಜಗುರು ಇದ್ದರು.