ಪತ್ರಕರ್ತನಿಗೆ ಹಲ್ಲೆ ಪ್ರಕರಣ: ಡಿವೈಎಫ್ಐ ಪ್ರತಿಭಟನೆ
ಕುಂದಾಪುರ, ಆ.21: ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿ ಕುಂದಾಪುರ ತಾಲ್ಲೂಕು ಡಿವೈಎಫ್ಐ ಸಂಘಟನೆ ವತಿಯಿಂದ ಶುಕ್ರವಾರ ಸಂಜೆ ಶಾಸ್ತ್ರೀ ಸರ್ಕಲ್ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಸಿಪಿಐಎಂ ಕಾರ್ಯದರ್ಶಿ ಸುರೇಶ್ ಕಲ್ಲಾಗಾರ್ ಅವರು, ಪತ್ರಕರ್ತರ ಮೇಲಿನ ದಾಳಿ ಖಂಡನೀಯ. ಬಡವರಿಗೆ ಹಾಗೂ ನಿರ್ಗತಿಕರಿಗೆ ಸೇವೆ ನೀಡುವ ಸರಕಾರಿ ಆಸ್ಪತ್ರೆಯಲ್ಲಿ ಭ್ರಷ್ಟಾಚಾರ ಆರೋಪ ಬರುವುದು ಸರಿಯಲ್ಲ. ಈ ಕುರಿತು ವರದಿ ಮಾಡಿದ ಪತ್ರಕರ್ತರನ್ನು ಗುರಿಯಾಗಿಸಿ ಹಲ್ಲೆ ನಡೆಸಿರುವುದು ಅಮಾನವೀಯ. ಪತ್ರಿಕೆಯ ವರದಿ ಬಗ್ಗೆ ಆಕ್ಷೇಪ ಇದ್ದಲ್ಲಿ ಕಾನೂನು ಕ್ರಮಕ್ಕೆ ಮುಂದಾಗ ಬಹುದಿತ್ತು. ವೈದ್ಯಕೀಯ ಧರ್ಮಕ್ಕೆ ಅಪ್ರಚಾರವಾಗುವಂತೆ ಹಲ್ಲೆ ಮಾಡಿರುವ ವೈದ್ಯರ ವಿರುದ್ಧ ಸೂಕ್ತ ಕ್ರಮಕ್ಕೆ ಸರಕಾರ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಶಶಿಧರ ಹೆಮ್ಮಾಡಿ, ಶಂಕರ್ ಕೆಂಚನೂರು, ಚಂದ್ರಕಾಂತ್(ಚೆನ್ನ), ಗಣೇಶ್ ಮೆಂಡನ್, ಡಿವೈಎಫ್ಐ ಸಂಘಟನೆ ಮುಖಂಡರಾದ ಗಣೇಶ್ದಾಸ್, ರಾಜ ಬಿಟಿಆರ್, ರವಿ.ವಿ.ಎಂ, ಮಂಜುನಾಥ್ ಶೋಗನ್, ಉದಯ ಟೈಲರ್, ಸಂಪತ್ ಕುಮಾರ್, ಚಂದ್ರ ಬಿಟಿಆರ್, ಗಣೇಶ್ ಕಲ್ಲಾಗರ, ವಿಜಯ್ ಕೆ.ಎಸ್., ಸಂತೋಷ್ ಹೆಮ್ಮಾಡಿ, ಪ್ರಶಾಂತ್ ಭಂಡಾರಿ, ಹರೀಶ್ ಹೆಮ್ಮಾಡಿ, ವಿಘ್ನೇಶ್ ಹೆಮ್ಮಾಡಿ ಉಪಸ್ಥಿತರಿದ್ದರು.