ದನ ಓಡಿಸಲು ಹೋದ ವ್ಯಕ್ತಿ ಬಾವಿಗೆ ಬಿದ್ದು ಮೃತ್ಯು

Update: 2024-05-02 16:12 GMT

ಗಂಗೊಳ್ಳಿ, ಮೇ 2: ದನಗಳನ್ನು ಓಡಿಸಿಕೊಂಡು ಹೋದ ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮೇ 1ರಂದು ರಾತ್ರಿ ವೇಳೆ ಕೊಡಪಾಡಿ ಎಂಬಲ್ಲಿ ನಡೆದಿದೆ.

ಮೃತರನ್ನು ಗುಜ್ಜಾಡಿ ಗ್ರಾಮದ ನಾಗರಾಜ(38) ಎಂದು ಗುರುತಿಸಲಾಗಿದೆ. ಇವರು ರಾತ್ರಿ ಊಟ ಮಾಡಿ ಮನೆಯ ಸಿಟ್ ಔಟ್‌ನಲ್ಲಿ ಮಲಗಿದ್ದು ಮನೆಯ ತೋಟಕ್ಕೆ ಬಂದಿದ್ದ ಬಿಡಾಡಿ ದನಗಳನ್ನು ಓಡಿಸಿಕೊಂಡು ಹೋದರೆನ್ನ ಲಾಗಿದೆ. ಈ ವೇಳೆ ಇವರು ಕೊಡಪಾಡಿಯ ನಾರಾಯಣ ಎಂಬವರ ಜಾಗದಲ್ಲಿ ಆವರಣವಿಲ್ಲದ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿ ದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News