ಮಗನಿಂದ ಕುಡಿದು ಗಲಾಟೆ: ತಂದೆ ಆತ್ಮಹತ್ಯೆ

Update: 2024-05-05 15:44 GMT

ಶಂಕರನಾರಾಯಣ: ಮಗ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ವಿಚಾರದಲ್ಲಿ ಮನನೊಂದ ತಂದೆ ಆತ್ಮಹತ್ಯೆ ಮಾಡಿ ಕೊಂಡ ಘಟನೆ ಹಿಲಿಯಾಣ ಎಂಬಲ್ಲಿ ನಡೆದಿದೆ.

ಮೃತರನ್ನು ಹಿಲಿಯಾಣ ಗ್ರಾಮದ ಮಂಜು ಮರಕಾಲ(75) ಎಂದು ಗುರುತಿಸಲಾಗಿದೆ. ಇವರ ಮಗ ರಾಜೇಶ ಕುಡಿದು ಮನೆ ಯಲ್ಲಿ ಗಲಾಟೆಯನ್ನು ಮಾಡುತ್ತಿದ್ದು, ಆತನಿಗೆ ತಂದೆ ಬುದ್ದಿವಾದ ಹೇಳಿದರೂ ಆತ ಕೇಳುತ್ತಿರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ಬೆಸರಗೊಂಡ ಮಂಜು ಮರಕಾಲ ಎ.20ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು.

ಇದರ ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಮಣಿಪಾಲ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೇ 4ರಂದು ಮಧ್ಯಾಹ್ನ ವೇಳೆ ಮೃತಪಟ್ಟರು ಎಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News