ಅನಧಿಕೃತ ಚುನಾವಣಾ ಏಜೆಂಟ್ ಬೂತ್ಗಳ ತೆರವು
Update: 2024-05-07 13:51 GMT
ಬೈಂದೂರು, ಮೇ 7: ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ಗುಜ್ಜಾಡಿ ಗ್ರಾಮದ ನಾಯಕವಾಡಿಯಲ್ಲಿ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಸ್ಥಳೀಯ ಗ್ರಾಪಂ ಪರವಾನಿಗೆ ಪಡೆಯದೆ ಹಾಕಲಾದ ಏಜೆಂಟ್ ಬೂತ್ನ್ನು ಅಧಿಕಾರಿಗಳು ತೆರವುಗೊಳಿಸಿದ ಘಟನೆ ಇಂದು ನಡೆದಿದೆ.
ಚುನಾವಣೆಯ ಅಧಿಕಾರಿ ಕಿರಣ್ ಹಾಗೂ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ಹರೀಶ್ ಆರ್.ನಾಯ್ಕ್ ಸ್ಥಳಕ್ಕೆ ಆಗಮಿಸಿ ದಾಖಲೆ ಪರಿಶೀಲಿಸಿ ದಾಗ ಒಂದೆರಡು ಅನಧಿಕೃತ ಏಜೆಂಟ್ ಬೂತ್ಗಳು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಪರವಾನಿಗೆ ಪಡೆಯದೆ ಹಾಕಲಾದ ಬೂತ್ಗಳನ್ನು ಅಧಿಕಾರಿಗಳು ತಕ್ಷಣವೇ ತೆರವುಗೊಳಿಸಿದರು.
ಇದರಿಂದ ಸ್ಥಳದಲ್ಲಿ ಸ್ವಲ್ಪಹೊತ್ತು ಬಿಗುವಿನ ವಾತಾವರಣ ನಿರ್ಮಾಣ ವಾಯಿತು. ಈ ಹಿನ್ನೆಲೆಯಲ್ಲಿ ಘಟನಾ ಸ್ಥಳಕ್ಕೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳು ಕರೆಸಲಾಯಿತು.