ಹೂಡಿಕೆಗೆ ಲಾಭಾಂಶ ನೀಡುವುದಾಗಿ ನಂಬಿಸಿ ವಂಚನೆ: ಪ್ರಕರಣ ದಾಖಲು
Update: 2024-05-07 16:03 GMT
ಉಡುಪಿ, ಮೇ 7: ಹೂಡಿಕೆಗೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಕಾಡುಬೆಟ್ಟು ನಿವಾಸಿ ಸುದರ್ಶನ(28) ಎಂಬವರಿಗೆ ಟಾಸ್ಕ್ ನಡೆಸಿ ಹಣ ಗಳಿಸುವ ಬಗ್ಗೆ ಮೊಬೈಲ್ಗೆ ಸಂದೇಶ ಬಂದಿದ್ದು, ಅದನ್ನು ನಂಬಿದ ಸುದರ್ಶನ್ ಹಣವನ್ನು ಹೂಡಿಕೆ ಮಾಡಿದ್ದರು. ನಂತರದಲ್ಲಿ ಹೆಚ್ಚಿನ ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ಬರುವುದಾಗಿ ನಂಬಿದ ಅವರು ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗೆ ಮೇ 6ರಂದು ಹಂತ ಹಂತವಾಗಿ ಒಟ್ಟು 5,05,000ರೂ. ಹಣವನ್ನು ಪಾವತಿಸಿದರು. ಆದರೆ ಆರೋಪಿಗಳು ಲಾಭಾಂಶವನ್ನು ನೀಡದೇ ಹಣವನ್ನೂ ಹಿಂತಿರುಗಿಸದೇ ಮೋಸ ಮಾಡಿ ರುವುದಾಗಿ ದೂರಲಾಗಿದೆ.