ಪಲಿಮಾರು: ಮುಂಬೈಯಿಂದ ಬಂದ ವ್ಯಕ್ತಿ ಕೆರೆಗೆ ಬಿದ್ದು ಮೃತ್ಯು

Update: 2024-05-10 16:32 GMT

ಪಡುಬಿದ್ರಿ, ಮೇ 10: ಕುಟುಂಬದ ಮನೆಗೆ ದೈವದ ಕೋಲ ಹಾಗೂ ತಂಬಿಲದ ಪ್ರಯುಕ್ತ ಮುಂಬೈಯ ಮಲಾಡ್‌ವೆಸ್ಟ್‌ನಿಂದ ಆಗಮಿಸಿದ್ದ ಆನಂದ್ (55) ಎಂಬವರ ಮೃತದೇಹ ಮೇ 9ರಂದು ಪಲಿಮಾರು ಗುಂಡಿಯ ಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಆನಂದ್ ಅವರು ಮೇ 7ರಂದು ರಾತ್ರಿ 11 ಗಂಟೆಗೆ ದೈವದ ದರ್ಶನದ ಬಳಿಕ ನಾಪತ್ತೆಯಾಗಿದ್ದರು. ಹುಡುಕಾಟದ ಬಳಿಕ ಮೇ 9ರಂದು ಸಂಜೆ 4ಗಂಟೆಗೆ ಪಲಿಮಾರು ಗ್ರಾಮದ ಪಲಿಮಾರು ಗುಂಡಿ ಕೆರೆಯ ನೀರಿನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾ ಗಿತ್ತು. ಮೇ 7ರ ರಾತ್ರಿ ಕೈಯಲ್ಲಿದ್ದ ಮೊಬೈಲ್ ಬಿದ್ದು ಹೋದದ್ದನ್ನು ಹುಡುಕುತ್ತಾ ಹೋದವರು ರಾತ್ರಿಯ ವೇಳೆ ರಸ್ತೆಯನ್ನು ಗುರುತಿಸಲಾಗದೇ ರಸ್ತೆ ಪಕ್ಕದಲ್ಲಿದ್ದ ಕೆರೆ ನೀರಿಗೆ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News