ಉಡುಪಿ | ಉಚಿತ ಆರೋಗ್ಯ ಮೇಳ: ವೈದ್ಯಕೀಯ ಶಿಬಿರ
ಉಡುಪಿ, ಸೆ.6: ಜಯಂಟ್ಸ್ ಗ್ರೂಪ್ ಆಫ್ ಉಡುಪಿ, ವಿಶ್ವಭಾರತಿ ಅಸೋಸಿಯೇಷನ್ ಚಿಟ್ಪಾಡಿ, ವಿಶ್ವಭಾರತಿ ಸೌಹಾರ್ದ ಕ್ರೆಡಿಟ್ ಸಹಕಾರಿ ಸಂಘ ಬೀಡಿನಗುಡ್ಡೆ, ರೋಟರಿ ಕ್ಲಬ್ ಮಣಿಪಾಲ ಹಾಗೂ ಸಿಎಸ್ಐ ಲೊಂಬಾರ್ಡ್ ಸ್ಮಾರಕ ಮಿಷನ್ ಆಸ್ಪತ್ರೆ ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ಮೇಳ(ವೈದ್ಯಕೀಯ ಶಿಬಿರ)ವನ್ನು ಗುರುವಾರ ಚಿಟ್ಪಾಡಿ ಶ್ರೀಶಾರದಾಂಬ ದೇವಸ್ಥಾನದಲ್ಲಿ ನಡೆಯಿತು.
ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ ಉದ್ಘಾಟಿಸಿ ಶುಭ ಹಾರೈಸಿದರು. ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು, ಜಯಂಟ್ಸ್ ಗ್ರೂಪ್ ಉಡುಪಿ ಕಾರ್ಯದರ್ಶಿ ದಿವಾರ್ಕ ಪೂಜಾರಿ, ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಹೇಶ್ ಶೆಣೈ, ರವಿನಾಥ್ ಪೈ, ರಾಮಚಂದ್ರ ಶೆಣೈ, ವಿಶ್ವಭಾರತಿ ಸೊಸೈಟಿಯ ಸಿಇಓ ಶಶಿಕಿರಣ್ ಉಳಿತ್ತಾಯ, ರೋಟರಿ ಕ್ಲಬ್ ಮಣಿಪಾಲ್ ಅಧ್ಯಕ್ಷೆ ಶಶಿಕಲಾ ರಾಜ ವರ್ಮ, ಮಿಷನ್ ಆಸ್ಪತ್ರೆಯ ಪಿಆರ್ಓ ರೋಹಿ ರತ್ನಾಕರ ಉಪಸ್ಥಿತರಿದ್ದರು.
ಉಡುಪಿ ಮಿಷನ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ದೀಪಾ ವೈ ರಾವ್, ಡಾ.ಅಭಿನಯ್ ಆಶೋಕ್, ಡಾ.ಅರ್ಜುನ್ ಬಳ್ಳಾಲ್, ಡಾ.ವೈಭವ್ ಭಾಗವಹಿಸಿ, ಸ್ತ್ರೀ ರೋಗ, ನೇತ್ರ, ಕೀಲು ಮತ್ತು ಎಲುಬು, ಸಾಮಾನ್ಯ ಆರೋಗ್ಯ, ಮಧುಮೇಹ ತಪಾಸಣೆ ನಡೆಸಿ, ಔಷಧಿಗಳನ್ನು ಉಚಿತವಾಗಿ ವಿತರಿಸಿದರು. ವೈದ್ಯಕೀಯ ಶಿಬಿರದಲ್ಲಿ ಸುಮಾರು 300ಕ್ಕೂ ಅಧಿಕಜನ ಪ್ರಯೋಜನ ಪಡೆದುಕೊಂಡರು. ಸಂಯೋಜಕ ದೇವದಾಸ್ ಕಾಮತ್ ಉಡುಪಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.