ಚುನಾವಣಾ ವೀಕ್ಷಕರ ನಿಯೋಜನೆ
ಮಂಗಳೂರು, ಎ.17: ಭಾರತ ಚುನಾವಣಾ ಆಯೋಗವು ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾ ವೀಕ್ಷಕರನ್ನು ನಿಯೋಜಿಸಿದೆ. ಚುನಾವಣಾ ಖರ್ಚುಗಳಿಗೆ ಸಂಬಂಧಿಸಿದ ದೂರು/ಅಹವಾಲುಗಳನ್ನು ಸಾರ್ವಜನಿಕರು ವೀಕ್ಷಕರಿಗೆ ಸಲ್ಲಿಸಬಹುದು.
ಬೆಳ್ತಂಗಡಿ ಮತ್ತು ಮೂಡುಬಿದಿರೆ ವಿಧಾನಸಭಾ ಕ್ಷೇತ್ರಕ್ಕೆ ನೀರಜ್ (ದೂ.ಸಂ:8277807202), ಮಂಗಳೂರು ನಗರ ಉತ್ತರಕ್ಕೆ ಎಸ್. ಅನಿಲ್ ಕುಮಾರ್ (ದೂ.ಸಂ:8277807208, 0824-298 9007), ಮಂಗಳೂರು ನಗರ ದಕ್ಷಿಣ ಮತ್ತು ಮಂಗಳೂರು ಕ್ಷೇತ್ರಕ್ಕೆ ವಿನೋದ್ ಶರ್ಮಾ (ದೂ.ಸಂ: 8277807209, 0824-2989006), ಬಂಟ್ವಾಳ ಕ್ಷೇತ್ರಕ್ಕೆ ಶ್ಯಾಮ್ ಮನೋಹರ್ ಸಿಂಗ್(ದೂ.ಸಂ: 8277807210), ಪುತ್ತೂರು ಮತ್ತು ಸುಳ್ಯಕ್ಕೆ ಅಮಿತ್ ಕುಮಾರ್ ಸಿಂಘಲ್ (ದೂ.ಸಂ: 8277807211) ಅವರನ್ನು ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿಯ ಕಚೇರಿ, ದ.ಕ ಮಂಗಳೂರು (ದೂ.ಸಂ: 0824-2220590) ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Next Story