Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಪುತ್ತೂರು: ಪಿಂಕ್ ಮತಗಟ್ಟೆಯಲ್ಲಿ ಇತರ...

ಪುತ್ತೂರು: ಪಿಂಕ್ ಮತಗಟ್ಟೆಯಲ್ಲಿ ಇತರ ಬಣ್ಣವೇ ಹೆಚ್ಚು

ವಾರ್ತಾಭಾರತಿವಾರ್ತಾಭಾರತಿ12 May 2018 7:16 PM IST
share
ಪುತ್ತೂರು: ಪಿಂಕ್ ಮತಗಟ್ಟೆಯಲ್ಲಿ ಇತರ ಬಣ್ಣವೇ ಹೆಚ್ಚು

ಪುತ್ತೂರು,ಮೇ.12: ಮತದಾರರನ್ನು ವಿಶೇಷವಾಗಿ ಸೆಳೆಯುವ ನಿಟ್ಟಿನಲ್ಲಿ ತಾಲೂಕಿನ ಕೋಡಿಂಬಾಡಿ ಮತದಾನ ಕೇಂದ್ರವನ್ನು ಪಿಂಕ್, ಬಲ್ನಾಡು ಮತದಾನ ಕೇಂದ್ರವನ್ನು ಯತ್ನಿಕ್ ಮತ್ತು ಸಂತಫಿಲೋಮಿನಾ ಪ್ರೌಢಶಾಲೆಯ ಮತದಾನ ಕೇಂದ್ರವನ್ನು ಮಾದರಿ ಮತದಾನ ಕೇಂದ್ರವಾಗಿ ಚುನಾವಣಾ ಅಯೋಗ ಘೋಷಿಸಿ ಈ ಕೇಂದ್ರಗಳನ್ನು ಜನಾಕರ್ಷಣೀಯ ಕೇಂದ್ರವಾಗಿ ಮಾಡಲು ಪ್ರಯತ್ನ ನಡೆಸಿತ್ತು. ಆದರೆ ಪಿಂಕ್ ಮತಗಟ್ಟೆಯಲ್ಲಿ ಪಿಂಕ್ ಬಣ್ಣಕ್ಕಿಂತಲೂ ಇತರ ಬಣ್ಣವೇ ಹೆಚ್ಚಾಗಿ ಕಾಣಿಸಿಕೊಂಡು ಆಯೋಗದ ಉದ್ದೇಶವನ್ನೇ ಅಣಕು ಮಾಡುವಂತಿತ್ತು. 

ಮಹಿಳಾ ಮತದಾರರನ್ನು ಹೆಚ್ಚು ಹೊಂದಿರುವ ಆಧಾರದಲ್ಲಿ ಕೋಡಿಂಬಾಡಿ ಮತಗಟ್ಟೆಯನ್ನು ಪಿಂಕ್ ಮತಗಟ್ಟೆಯಾಗಿ ಮಾಡಲಾಗಿತ್ತು. ಮತಗಟ್ಟೆ ಹೊರನೋಟಕ್ಕೆ ಅಲಂಕಾರಗೊಂಡಿದ್ದರೂ ಇಲ್ಲಿ ಪಿಂಕ್ ಬಣ್ಣವನ್ನೇ ಬಳಕೆ ಮಾಡಬೇಕು ಎಂಬ ಸೂಚನೆಗೆ ಬದಲಾಗಿ ಕೇಸರಿ, ನೀಲಿ ಸೇರಿದಂತೆ ವಿವಿಧ ಬಣ್ಣಗಳ ತಾಣವಾಗಿ ಕಂಡು ಬಂತು. ಮತದಾರರಿಗೆ ಬಂದು ವಿಶ್ರಮಿಸಿಕೊಳ್ಳಲು ಶಾಮಿಯಾನ ಬಳಕೆ ಮಾಡಲಾಗಿತ್ತು. ಚೇರ್ ಗಳಿಗೆ ಬಿಳಿ ಬಣ್ಣದ ಬಟ್ಟೆಯನ್ನು ಹೊದಿಸಲಾಗಿತ್ತು. ಮತದಾನ ಕೇಂದ್ರ ಒಳಗೆ ಮಹಿಳಾ ಸಿಬ್ಬಂದಿಗಳು ಪಿಂಕ್ ಬಣ್ಣದ ಬಟ್ಟೆ ಧರಿಸಿದ್ದರೂ ಇಲ್ಲಿ ಅಲಂಕರಿಸಲಾಗಿದ್ದ ವಸ್ತ್ರಗಳಲ್ಲಿ ಪಿಂಕ್ ಬದಲಿಗೆ ಕೇಸರಿ ಹಾಗೂ ಇತರ ಬಣ್ಣಗಳೇ ಎದ್ದು ಕಾಣುತ್ತಿದ್ದವು. ಹೀಗಾಗಿ ಪಿಂಕ್ ಮತದಾನ ಕೇಂದ್ರ ಪಿಂಕ್ ಅವಾಂತರವಾಗಿ ಆಯೋಗದ ಚಿಂತನೆಗೆ ವ್ಯತಿರಿಕ್ತವಾಗಿ ಕಂಡು ಬಂತು. ಆಯೋಗದ ಸೂಚನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ವಿಫಲತೆ ಕಂಡುಬರುತ್ತಿತ್ತು.

ಚುನಾವಣಾ ಕೇಂದ್ರದಿಂದ 100 ಮೀಟರ್ ಒಳಗಡೆ ಯಾವುದೇ ವಾಹನವನ್ನು ನಿಲುಗಡೆ ಮಾಡಬಾರದು ಎಂಬ ಸೂಚನೆಗಳಿದ್ದರೂ ಇಲ್ಲಿನ ಮತಗಟ್ಟೆ ಅಧ್ಯಕ್ಷಾಧಿಕಾರಿಯ ಪತಿಯ ಕಾರು ಮಾತ್ರ ಮತಗಟ್ಟೆಯ ಅಂಗಣದಲ್ಲಿಯೇ ನಿಂತಿದ್ದು, ಅವರ ಪತಿ ಕೇಂದ್ರದ ಪಕ್ಕದಲ್ಲಿಯೇ ನಿಂತಿದ್ದರು. ಕಾನೂನು ಪಾಲಿಸುತ್ತಿದ್ದೇನೆ ಎಂದು ಹೇಳುತ್ತಿರುವ ಈ ಅಧಿಕಾರಿಯು ತನ್ನ ಪತಿಯ ಕಾರನ್ನು ಮಾತ್ರ ಇಲ್ಲಿ ನಿಲ್ಲಿಸಲು ಅವಕಾಶ ಕೊಟ್ಟದ್ದು ಹೇಗೆ ಎಂದು ಸ್ಥಳೀಯರು ಸ್ಥಳಕ್ಕೆ ವರದಿಗಾರಿಕೆಗಾಗಿ ತೆರಳಿದ್ದ ಮಾಧ್ಯಮದವರಲ್ಲಿ ಪ್ರಶ್ನಿಸಿದರು. ಈ ಮಾಹಿತಿ ತಿಳಿಯುತ್ತಿದ್ದಂತೆ ಕಾರು ಮತಗಟ್ಟೆಯಿಂದ ಹೊರಕ್ಕೆ ಬಂದು ರಸ್ತೆಯ ಬದಿಯಲ್ಲಿ ನಿಲುಗಡೆಗೊಂಡಿತು. 

ಬಲ್ನಾಡು ಯತ್ನಿಕ್ ಕೇಂದ್ರದಲ್ಲಿ ನಾಲ್ಕು ತುಂಡು ತೆಂಗಿನ ಗರಿಯ ಅಲಂಕಾರ:
ಬಲ್ನಾಡಿನ ಉಜಿರುಪಾದೆ ಶಾಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದವರನ್ನು ಮತದಾನದತ್ತ ಆಕರ್ಷಿಸಲು ಯತ್ನಿಕ್ ಮತಗಟ್ಟೆ ನಿರ್ಮಾಣ ಮಾಡಲಾಗಿತ್ತು. ಸಾಂಪ್ರದಾಯಿಕ ಮತಗಟ್ಟೆಯಾಗಿ ರೂಪಿಸುವುದು ಚುನಾವಣಾ ಆಯೋಗದ ಉದ್ದೇಶವಾಗಿತ್ತು. ಆದರೆ ಯಾವುದೇ ಸಾಂಪ್ರದಾಯಿಕ ಮೆರುಗು ಇಲ್ಲದೆ 4 ತುಂಡು ಒಣ ತೆಂಗಿನ ಗರಿಯ ಸಣ್ಣ ದ್ವಾರ ಮತ್ತು ಪಕ್ಕದಲ್ಲಿ 2 ಚಿತ್ರಗಳನ್ನು ಅಳವಡಿಸಲಾಗಿತ್ತು. ಜಿಲ್ಲೆಯ ಜನಪದ ಮತ್ತು ಸಂಪ್ರದಾಯವನ್ನು ಬಿಂಬಿಸುವ ಶೃಂಗಾರದ ಯಾವುದೇ ಗುರುತುಗಳು ಅಲ್ಲಿ ಕಂಡು ಬರಲಿಲ್ಲ. ಶೃಂಗಾರದ ಜವಾಬ್ದಾರಿಯನ್ನು ಬೆಂಗಳೂರಿನವರಿಗೆ ನೀಡಿದ್ದಾರೆ. ಅವರು ಯಾವುದೂ ಮಾಡದೆ ಕಾಟಾಚಾರಕ್ಕೆ ತೆಂಗಿನ ತುಂಡು ಕಟ್ಟಿ ಹೋಗಿದ್ದಾರೆ. ಮತಗಟ್ಟೆ ಶ್ರಂಗಾರದ ಜವಾಬ್ದಾರಿಯನ್ನು ಸ್ಥಳೀಯರಿಗೆ ನೀಡಿದ್ದರೆ ಉತ್ತಮವಾಗಿ ಮಾಡಬಹುದಿತ್ತು. ಚುನಾವಣಾ ಅಯೋಗದ ಕಣ್ಣಿಗೆ ಮಣ್ಣೆರಚುವ ಕೆಲಸ ಆಗಿದೆ ಎಂದು ಸ್ಥಳೀಯರು ದೂರಿದರು. 

ಗಮನ ಸೆಳೆದ ಮಾದರಿ ಮತಗಟ್ಟೆ
ಇಲ್ಲಿನ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿರುವ ಮಾದರಿ ಮತಗಟ್ಟೆಯನ್ನು ಮದುವೆ ಮಂಟಪದಂತೆ ಶೃಂಗರಿಸಲಾಗಿತ್ತು. ಪ್ರವೇಶ ದ್ವಾರಕ್ಕೆ ಬಾಳೆ ಮತ್ತು ಹಸಿರು ತೋರಣ, ಮುಖ್ಯದ್ವಾರದಿಂದ ಮತದಾನದ ಕೊಠಡಿಯ ತನಕ ರೆಡ್ ಕಾರ್ಪೆಟ್, ಮತದಾನ ಕೊಠಡಿಯ ಮುಂಬಾಗದಲ್ಲಿ ಮತದಾರರಿಗೆ ಕುಳಿತುಕೊಳ್ಳಲು ಉತ್ತಮ ಆಸನದ ವ್ಯವಸ್ಥೆ ಹಾಗೂ ಟೇಬಲ್ ಮೇಲೆ ಓದಲು ಪುಸ್ತಕದ ವ್ಯವಸ್ಥೆ ಮಾಡಲಾಗಿತ್ತು.

ಅನಾರೋಗ್ಯವಾದಲ್ಲಿ ಔಷಧಿಯೊಂದಿಗೆ ಓರ್ವ ಶುಶ್ರೂಷಕಿಯು ಚಿಕಿತ್ಸೆಗಾಗಿ ಸಿದ್ದವಿದ್ದರು. ಕೇಂದ್ರದ  ಹೊರಭಾಗದಲ್ಲಿ ಮತದಾನದ ಬಗ್ಗೆ ಜಾಗೃತಿ ಘೋಷಣೆಗಳನ್ನು ಅಲ್ಲಲ್ಲಿ ಅಳವಡಿಸಲಾಗಿತ್ತು. ಒಟ್ಟಿನಲ್ಲಿ ಈ ಕೇಂದ್ರವು ಹೆಸರಿಗೆ ತಕ್ಕಂತೆ ಮಾದರಿಯಾಗಿ ಎಲ್ಲರನ್ನೂ ಸೆಳೆಯುವಂತಿತ್ತು. 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X