ಪುತ್ತೂರು: ಅನಧಿಕೃತ ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
25ಕ್ಕೂ ಹೆಚ್ಚು ಮಂದಿ ವಶ

ಪುತ್ತೂರು, ಜೂ. 19: ನಗರದ ಬೊಳುವಾರಿನ ಶಾಲೆಯ ಮುಂಭಾಗದ ಪ್ರತಿಷ್ಠಿತ ಕಟ್ಟಡದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಜೂಜಿನ ಅಡ್ಡೆಗೆ ಎಸ್ಪಿಯವರ ನಿರ್ದೇಶನದಂತೆ ಪುತ್ತೂರಿನ ಪೊಲೀಸ್ ವೃತ್ತ ನಿರೀಕ್ಷರಾದ ಶರಣಾ ಗೌಡ ನೇತೃತ್ವದಲ್ಲಿ ಪುತ್ತೂರಿನ ಪೊಲೀಸರು ದಾಳಿ ನಡೆಸಿದ್ದಾರೆ.
ಸುಮಾರು 25 ಕ್ಕೂ ಅಧಿಕ ಅರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಂದರ್ಭ ಅಕ್ರಮ ಅಡ್ಡೆ ನಡೆಸುತ್ತಿದ್ದಾರೆ ಎನ್ನಲಾದ ಸುಜಿತಾ ಸ್ಥಳದಲ್ಲೇ ಇದ್ದು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
Next Story