ಸೋರುತ್ತಿದೆ 3,000 ಕೋಟಿ ರೂ. ವೆಚ್ಚದ ‘ಏಕತೆಯ ಪ್ರತಿಮೆ’ಯ ವೀಕ್ಷಕ ಗ್ಯಾಲರಿ!: ವಿಡಿಯೋ ವೈರಲ್
ನೀರು ತುಂಬಿ ಪ್ರವಾಸಿಗರಿಗೆ ಕಿರಿಕಿರಿ

ಹೊಸದಿಲ್ಲಿ, ಜೂ.29: ಕಳೆದ ವರ್ಷದ ಅಕ್ಟೋಬರ್ ತಿಂಗಳಲ್ಲಿ ಗುಜರಾತ್ ರಾಜ್ಯದ ನರ್ಮದಾ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ್ದ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜಗತ್ತಿನ ಅತ್ಯಂತ ಎತ್ತರದ ಹಾಗೂ 3,000 ಕೋಟಿ ರೂ. ವೆಚ್ಚದಲ್ಲಿ ತಲೆಯೆತ್ತಿದ ‘ಏಕತೆಯ ಪ್ರತಿಮೆ’ ನೋಡಲು ಬಹಳಷ್ಟು ಪ್ರವಾಸಿಗರು ಆಗಮಿಸುತ್ತಿದ್ದಾರೆ.
ಈ 183 ಮೀಟರ್ ಎತ್ತರದ ಪ್ರತಿಮೆಯನ್ನು ಜನರಿಗೆ ನೋಡಲು ಅನುಕೂಲ ಕಲ್ಪಿಸುವ 153 ಮೀಟರ್ ಎತ್ತರದಲ್ಲಿರುವ ವೀಕ್ಷಣಾ ಗ್ಯಾಲರಿಯ ಪರಿಸ್ಥಿತಿ ಮಾತ್ರ ಮಳೆಗಾಲದಲ್ಲಿ ದಯನೀಯವಾಗಿದೆ. ಗ್ಯಾಲರಿಯ ನೆಲದಲ್ಲಿ ಮಳೆ ನೀರಿನಿಂದ ಹಳ್ಳಗಳು ಸೃಷ್ಟಿಯಾಗಿದ್ದರೆ ಛಾವಣಿ ಕೂಡ ಅಲ್ಲಲ್ಲಿ ಸೋರುತ್ತಿದೆ. ಈ ಗ್ಯಾಲರಿಯಲ್ಲಿ ಏಕಕಾಲಕ್ಕೆ 200ರಷ್ಟು ಮಂದಿ ನಿಲ್ಲಬಹುದಾಗಿದೆ.
ನೈಋತ್ಯ ಮುಂಗಾರು ಗುಜರಾತ್ ರಾಜ್ಯಕ್ಕೆ ಜೂನ್ 25ರಂದು ಆಗಮಿಸಿದ ಬೆನ್ನಲ್ಲೇ ಅಲ್ಲಿ ಮಳೆ ಬಿರುಸುಗೊಂಡಿದ್ದು ವೀಕ್ಷಣಾ ಗ್ಯಾಲರಿಯ ದುಃಸ್ಥಿತಿ ಪ್ರವಾಸಿಗರಿಗೆ ನಿರಾಸೆಯುಂಟು ಮಾಡುತ್ತಿದೆ.
विश्व की सबसे उंची प्रतिमा स्टेच्यु ओफ युनिटी मे घुसा बारिश का पानी
— jayesh cHauHaN (@BeiNgjacks) June 29, 2019
व्यु गेलेरी समेत अन्य कई जगह पर पहोंचा वारिश का पानी
3 हजार करोड कि लागत से बनी है स्टेच्यु ओफ युनिटी कि सरदार पटेल साहव कि प्रतिमा#sardarpatel #statueofunity #gujarat pic.twitter.com/BMNyuaZn5X