ಜೂನಿಯರ್ ರೆಡ್ಕ್ರಾಸ್ ಕೌನ್ಸಿಲರ್ಗಳ ತರಬೇತಿ ಸಮಾರೋಪ

ಉಡುಪಿ: ಭಾರತೀಯ ರೆಡ್ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ, ಪರಿಪೋಷಣಂ ಯೋಜನೆಯಡಿ ಅಂತರ್ಗತ ಪ್ರೌಢಶಾಲೆಗಳ ಜೂನಿಯರ್ ರೆಡ್ಕ್ರಾಸ್ ಕೌನ್ಸಿಲರ್ ಗಳಿಗೆ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರ ದ ಸಮಾರೋಪ ಸಮಾರಂಭ ನಗರದ ಅಜ್ಜರಕಾಡು ರೆಡ್ಕ್ರಾಸ್ ಭವನದಲ್ಲಿ ನಡೆಯಿತು.
ರಾಜ್ಯ ಶಾಖೆ ಆಡಳಿತ ಮಂಡಳಿ ಸದಸ್ಯ ವಿ.ಜಿ.ಶೆಟ್ಟಿ ಮಾತನಾಡಿ, ವಿದ್ಯಾರ್ಥಿ ಗಳು ಜೀವನದಲ್ಲಿ ಉತ್ತಮ ಆರೋಗ್ಯ ಮತ್ತು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡು, ಬೇರೆಯವರ ಕಷ್ಟಗಳಿಗೆ ಸ್ವಂದಿಸುವ ಮನೋಭಾ ವನೆ ಬೆಳೆಸಿಕೊಳ್ಳಲು ಶಿಕ್ಷಕರು ಪ್ರೇರಣೆ ನೀಡಬೇಕು ಎಂದರು.
ರೆಡ್ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದು, ರೆಡ್ಕ್ರಾಸ್ ಸಂಸ್ಥೆ ಮತ್ತು ಅದರ ಕಾರ್ಯ ಚಟುವಟಿಕೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕುಂದಾಪುರ ಘಟಕದ ಸಭಾಪತಿ ಎಸ್.ಜಯಕರ್ ಶೆಟ್ಟಿ, ಜೂನಿಯರ್ ರೆಡ್ಕ್ರಾಸ್ ನಿರ್ದೇಶಕ ಡಾ. ಸಿ.ಎನ್.ಎನ್ ರಾಜು, ನಗರ ಸಂಚಾರಿ ಪೋಲಿಸ್ ಠಾಣೆಯ ಪೋಲಿಸ್ ಸಬ್ಇನ್ಸ್ಪೆಕ್ಟರ್ ಅಬ್ದುಲ್ ಖಾದರ್, ಪ್ರಥಮ ಚಿಕಿತ್ಸಾ ತರಬೇತುದಾರ ಡಾ. ಕೀರ್ತಿ ಪಾಲನ್, ರಾಜೇಂದ್ರ ಭಟ್ ಕೆ., ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ನಾಗರತ್ನ, ಜಿಲ್ಲಾ ಉಪ ಹೋಮ್ ಕಮಾಂಡೆಂಟ್ ಅಧಿಕಾರಿ ರಮೇಶ್, ಡಾ. ಸುರೇಶ್ ಶೆಣೈ, ಗೌರವ ಖಜಾಂಚಿ ರಮಾದೇವಿ, ರಾಜ್ಯ ಶಾಖೆಯ ಜೂನಿಯರ್ ರೆಡ್ಕ್ರಾಸ್ ಕೋಆರ್ಡಿನೇಟರ್ ಆನಂದ ಗೌಡ, ಡಿಡಿಆರ್ಸಿ ಮತ್ತು ರೆಡ್ ಕ್ರಾಸ್ಸಿಬ್ಬಂದಿಗಳು ಉಪಸ್ಥಿತರಿದ್ದರು.
ಜೂನಿಯರ್ ರೆಡ್ಕ್ರಾಸ್ ನಿರ್ದೇಶಕ ಮತ್ತು ಪ್ರೋಗ್ರಾಮ್ ಕೋ-ಆರ್ಡಿನೇ ಟರ್ ಪದ್ಮಾಕಿಣಿ ಕಾರ್ಯಕ್ರಮ ನಿರೂಪಿಸಿ, ಗೌರವ ಕಾರ್ಯದರ್ಶಿ ಬಿ. ರತ್ನಾಕರ ಶೆಟ್ಟಿ ವಂದಿಸಿದರು.
ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಪ್ರೌಢಶಾಲೆಗಳ ೪೯ ಜೂನಿಯರ್ ರೆಡ್ಕ್ರಾಸ್ ಕೌನ್ಸಿಲರ್ಗಳು ಭಾಗವಹಿಸಿದ್ದು, ತರಬೇತಿ ಪಡೆದು ಕೊಂಡರು. ಕಾರ್ಯಗಾರದಲ್ಲಿ ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ಮತ್ತು ಮಾಸ್ಕ್ಗಳನ್ನು ವಿತರಿಸಲಾಯಿತು.