ಗಾಂಜಾ ಸೇವನೆ ಆರೋಪ : ಇಬ್ಬರು ವಶಕ್ಕೆ
ಉಡುಪಿ: ಗಾಂಜಾ ಸೇವನೆಗೆ ಸಂಬಂಧಿಸಿ ಇಬ್ಬರನ್ನು ಉಡುಪಿ ನಗರ ಪೊಲೀಸರು ಜು.೨ರಂದು ರಾತ್ರಿ ವೇಳೆ ಪುತ್ತೂರು ಗ್ರಾಮದ ರಾಜೀವ್ ನಗರದ ಕೊರಗ ಭವನದ ಬಳಿ ವಶಕ್ಕೆ ಪಡೆದುಕೊಂಡಿದ್ದಾರೆ.
ನಿಟ್ಟೂರಿನ ತಿರುಪತಿ(೧೯) ಹಾಗೂ ಕೌಶಿಕ್ ದೇವಾಡಿಗ(೨೦) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಫಾರೆನ್ಸಿಕ್ ಮೆಡಿಸಿನ್ ವಿಭಾಗ ದಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು, ತಜ್ಞರ ವರದಿಯಂತೆ ಇವರಿಬ್ಬರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story