ಬೆಂಗಳೂರು: ಎಸ್.ವೈ.ಎಸ್ ಜಿಲ್ಲಾ ಪದಾಧಿಕಾರಿಗಳಾಗಿ ಜಾಫರ್ ನೂರಾನಿ, ಪಯೋಟ ಸಖಾಫಿ ಪುನರಾಯ್ಕೆ

ಬೆಂಗಳೂರು, ಮಾ.9: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಬೆಂಗಳೂರು ಇದರ ಜಿಲ್ಲಾ ಮಹಾಸಭೆಯು ಶಿವಾಜಿನಗರದ ದಾರುಸ್ಸಲಾಂ ಸಭಾಂಗಣದಲ್ಲಿ ರಾಜ್ಯಾಧ್ಯಕ್ಷರಾದ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್ ಅವರ ನೇತೃತ್ವದಲ್ಲಿ ನಡೆಯಿತು. ಕಾರ್ಯಕ್ರಮವನ್ನು ರಾಜ್ಯ ವಖ್ಫ್ ಮಂಡಳಿ ಅಧ್ಯಕ್ಷರಾದ ಶಾಫಿ ಸಅದಿ ರವರು ಉಧ್ಘಾಟಿಸಿದರು.
ಜಿಲ್ಲೆಯ ನೂತನ ಅಧ್ಯಕ್ಷರಾಗಿ ಜಾಫರ್ ನೂರಾನಿ ಅಲ್ಸೂರ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಸಖಾಫಿ ಪಯೋಟ, ಕೋಶಾಧಿಕಾರಿಯಾಗಿ
ಶರ್ಶಾದ್ ಜಯನಗರ, ಉಪಾಧ್ಯಕ್ಷರಾಗಿ ಅನಸ್ ಸಿದ್ದೀಖೀ ಶಿವಾಜಿನಗರ , ಕಾರ್ಯದರ್ಶಿಗಳಾಗಿ ತಾಜುದ್ದೀನ್ ಫಾಳಿಲಿ (ದಅ್ವಾ), ಮುನೀರ್ ಕೆ.ಆರ್.ಪುರ (ಸಂಘಟನೆ), ನಾಸಿರ್ ಕೋರಮಂಗಲ (ಸಾಂತ್ವನ), ರಝಾಖ್ ಜಾಲಿ ಮೆಜೆಸ್ಟಿಕ್ (ಸೋಷಿಯಲ್), ಹಾಶಿಂ ಕೆಂಗೇರಿ (ಕಲ್ಚರಲ್), ಫಿರ್ದೌಸ್ ಮಾರ್ತಳ್ಳಿ (ಇಸಾಬಾ) ಇವರನ್ನು ಆರಿಸಲಾಯಿತು.
ಕಾರ್ಯಕ್ರಮದಲ್ಲಿ ಎಸ್.ವೈ.ಎಸ್.ರಾಜ್ಯ ಸಾಂತ್ವನ ಕಾರ್ಯದರ್ಶಿ ಬಶೀರ್ ಸಅದಿ ಪೀಣ್ಯ, ಎಸ್.ಎಂ.ಎ.ಬೆಂಗಳೂರು ಜಿಲ್ಲಾಧ್ಯಕ್ಷ ಅಬ್ದುಲ್ ರಹ್ಮಾನ್ ಹಾಜಿ ಅಲ್ಸೂರ್, ಹಾವೇರಿ ಜಿಲ್ಲಾ ವಖ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಬಿ.ಎ.ಇಬ್ರಾಹೀಂ ಸಖಾಫಿ, ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಸಖಾಫಿ, ಮಸ್ನವೀ ಗ್ಲೋಬಲ್ ಅಕಾಡೆಮಿ ಮ್ಯಾನೇಜರ್ ನೌಫಲ್ ಮದನಿ ನೇಜಾರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಜಾಫರ್ ನೂರಾನಿ ವಹಿಸಿದ್ದರು. ಇಬ್ರಾಹೀಂ ಸಖಾಫಿ ಪಯೋಟ ಸ್ವಾಗತಿಸಿ ಮುನೀರ್ ಕೆ.ಆರ್.ಪುರ ಧನ್ಯವಾದ ಸಲ್ಲಿಸಿದರು.
