ಮ್ಯಾನ್ಮಾರ್: ಭದ್ರತಾ ಪಡೆಗಳ ಗುಂಡಿಗೆ 38 ಬಲಿ; ವಿಶ್ವಸಂಸ್ಥೆ ರಾಯಭಾರಿ
ವಿಶ್ವಸಂಸ್ಥೆ (ನ್ಯೂಯಾರ್ಕ್), ಮಾ. 4: ಮ್ಯಾನ್ಮಾರ್ನಲ್ಲಿ ಕಳೆದ ತಿಂಗಳು ಸೇನಾ ಕ್ಷಿಪ್ರಕ್ರಾಂತಿ ನಡೆದ ಬಳಿಕ, ಬುಧವಾರ ಆ ದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ರಕ್ತಪಾತ ಸಂಭವಿಸಿದೆ ಎಂದು ಮ್ಯಾನ್ಮಾರ್ಗೆ ವಿಶ್ವಸಂಸ್ಥೆಯ ರಾಯಭಾರಿಯಾಗಿರುವ ಕ್ರಿಸ್ಟೀನ್ ಶ್ರಾನರ್ ಬರ್ಗನರ್ ಹೇಳಿದ್ದಾರೆ.
ಮ್ಯಾನ್ಮಾರ್ನ ಭದ್ರತಾ ಪಡೆಗಳ ಗುಂಡಿನ ದಾಳಿಗೆ ಬುಧವಾರ 38 ಪ್ರತಿಭಟನಕಾರರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
‘‘ಫೆಬ್ರವರಿ 1ರಂದು ಮ್ಯಾನ್ಮಾರ್ನಲ್ಲಿ ಸೇನಾ ಕ್ಷಿಪ್ರಕ್ರಾಂತಿ ನಡೆದ ಬಳಿಕ ದೇಶದಲ್ಲಿ ಈವರೆಗೆ 50ಕ್ಕೂ ಅಧಿಕ ಮಂದಿ ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ ಹಾಗೂ ಹಲವಾರು ಮಂದಿ ಗಾಯಗೊಂಡಿದ್ದಾರೆ’’ ಎಂದು ಅವರು ನುಡಿದರು.
Next Story