ಇಥಿಯೋಪಿಯಾದ ಬಂಧನ ಕೇಂದ್ರದಲ್ಲಿ ಸಾವಿರಾರು ಟಿಗ್ರೆ ಮೂಲನಿವಾಸಿಗಳು: ಮಾನವ ಹಕ್ಕು ನಿಗಾ ಸಮಿತಿ ವರದಿ
-

ಸಾಂದರ್ಭಿಕ ಚಿತ್ರ:PTI
ನ್ಯೂಯಾರ್ಕ್, ಜ.5: ಸೌದಿ ಅರೆಬಿಯಾದಿಂದ ವಾಪಸು ಕಳುಹಿಸಲಾದ ಸಾವಿರಾರು ಟಿಗ್ರೆ ಮೂಲನಿವಾಸಿಗಳನ್ನು ಇಥಿಯೋಪಿಯಾದಲ್ಲಿ ಬಲವಂತವಾಗಿ ಬಂಧನ ಕೇಂದ್ರದಲ್ಲಿ ಇಡಲಾಗಿದೆ ಅಥವಾ ಕಣ್ಮರೆ ಮಾಡಲಾಗಿದೆ ಎಂದು ಮಾನವಹಕ್ಕು ನಿಗಾ ಸಮಿತಿ (ಎಚ್ಆರ್ಡಬ್ಲ್ಯೂ) ವರದಿ ಮಾಡಿದೆ.
ಇಥಿಯೋಪಿಯಾದ ಫೆಡರಲ್ ಸರಕಾರದ ಪಡೆ ಹಾಗೂ ಉತ್ತರದ ಟಿಗ್ರೆ ವಲಯದ ಹೋರಾಟಗಾರರ ಮಧ್ಯೆ ಟಿಗ್ರೆ ವಲಯದಲ್ಲಿ 202ರ ನವೆಂಬರ್ ನಲ್ಲಿ ಭುಗಿಲೆದ್ದ ಕ್ರೂರ ಸಂಘರ್ಷದ ಬಳಿಕ ಈ ಬೆಳವಣಿಗೆ ನಡೆದಿದೆ. ಈ ಸಂಘರ್ಷದಲ್ಲಿ ಸಾವಿರಾರು ಮಂದಿ ಸಾವಿಗೀಡಾಗಿದ್ದು ಈ ಪ್ರದೇಶದಲ್ಲಿ ವ್ಯಾಪಕ ಮಾನವೀಯ ಬಿಕ್ಕಟ್ಟಿನ ಪರಿಸ್ಥಿತಿ ನೆಲೆಸಿದೆ ಎಂದು ಎಚ್ಆರ್ಡಬ್ಲ್ಯೂ ವರದಿ ಮಾಡಿದೆ. ಈ ಪ್ರದೇಶದಲ್ಲಿ ನವೆಂಬರ್ನಿಂದ 6 ತಿಂಗಳ ಅವಧಿಯ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ.
ಕಳೆದ ಕೆಲ ವರ್ಷಗಳಿಂದ ಉದ್ಯೋಗ ಅರಸಿ ಸೌದಿ ಅರೆಬಿಯಾಕ್ಕೆ ತೆರಳಿದ್ದ ಸಾವಿರಾರು ಇಥಿಯೋಪಿಯನ್ನರನ್ನು ಸೌದಿ ಅರೆಬಿಯಾ ವಾಪಾಸು ಕಳುಹಿಸಿದ್ದು ಅವರಲ್ಲಿ ಟಿಗ್ರೆಯನ್ನರನ್ನು ಪ್ರತ್ಯೇಕಿಸಿ ಇಥಿಯೋಪಿಯಾದ ರಾಜಧಾನಿ ಅಥವಾ ಇತರೆಡೆ ಅವರ ಇಚ್ಛೆಗೆ ವಿರುದ್ಧವಾಗಿ ಬಲವಂತದಿಂದ ಕೂಡಿ ಹಾಕಲಾಗಿದೆ. ಇತರರನ್ನು ಇಥಿಯೋಪಿಯಾದ ಉತ್ತರದಲ್ಲಿರುವ ಟಿಗ್ರೆಗೆ ಹಿಂದಿರುಗಲು ಅವಕಾಶ ನಿರಾಕರಿಸಲಾಗಿದೆ. ರಸ್ತೆಬದಿಯ ತಪಾಸಣಾ ಕೇಂದ್ರ ಅಥವಾ ವಿಮಾನ ನಿಲ್ದಾಣದ ತಪಾಸಣಾ ಕೇಂದ್ರದಲ್ಲಿ ಟಿಗ್ರೆಯನ್ನರನ್ನು ಗುರುತಿಸಿ ಅವರನ್ನು ಬಂಧನ ಕೇಂದ್ರಕ್ಕೆ ವರ್ಗಾಯಿಸಲಾಗುತ್ತಿದೆ ಎಂದು ಮಾನವಹಕ್ಕು ನಿಗಾ ಸಮಿತಿ ವರದಿ ಮಾಡಿದೆ.
ಸೌದಿ ಅರೆಬಿಯಾದಿಂದ ಗಡೀಪಾರು ಮಾಡಲಾಗಿರುವ ಟಿಗ್ರೆಯನ್ನರನ್ನು ಅಕ್ರಮ ಬಂಧನದಲ್ಲಿರಿಸಿ ಇಥಿಯೋಪಿಯಾದ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಮತ್ತು ಬಲವಂತದಿಂದ ಅವರನ್ನು ಕಣ್ಮರೆ ಮಾಡುತ್ತಿದ್ದಾರೆ ಎಂದು ಮಾನವ ಹಕ್ಕು ನಿಗಾ ಸಮಿತಿಯ ವಲಸಿಗರು ಮತ್ತು ನಿರಾಶ್ರಿತರ ಹಕ್ಕುಗಳ ಅಧಿಕಾರಿ ನಾಡಿಯಾ ಹಾರ್ಡ್ಮನ್ ಹೇಳಿದ್ದಾರೆ.
ಜನಾಂಗೀಯತೆಯ ಆಧಾರದಲ್ಲಿ ಟಿಗ್ರೆಯನ್ನರನ್ನು ಹೊರಹಾಕಲಾಗಿದೆ ಎಂಬ ವರದಿಯನ್ನು ಇಥಿಯೋಪಿಯಾ ಸರಕಾರ ನಿರಾಕರಿಸಿದ್ದು ಟಿಗ್ರೆ ಪಡೆಗೆ ನೆರವಾಗುತ್ತಿರುವ ಶಂಕಿತ ವ್ಯಕ್ತಿಗಳನ್ನು ಮಾತ್ರ ವಿಚಾರಣೆಗೆ ಒಳಪಡಿಸಲಾಗಿದೆ ಎಂದಿದೆ. ಈ ಕಾರ್ಯಾಚರಣೆಯಲ್ಲಿ ಸಾವಿರಾರು ಮಂದಿ ಸಿಕ್ಕಿಬಿದ್ದಿದ್ದಾರೆ ಎಂದು ಇಥಿಯೋಪಿಯಾದ ಸರಕಾರಕ್ಕೆ ಸಂಯೋಜಿತವಾಗಿರುವ ಮಾನವ ಹಕ್ಕು ನಿಗಾ ಸಮಿತಿ ಅಂದಾಜಿಸಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.