ಬೆಂಗಳೂರು: ದಂಪತಿಗೆ ಬೆದರಿಕೆ ಆರೋಪ; ನಿರ್ದೇಶಕ ಸೇರಿ ನಾಲ್ವರ ಸೆರೆ
ಬೆಂಗಳೂರು, ಮೇ 22: ದಂಪತಿಯ ಖಾಸಗಿ ಫೋಟೋ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ನೀಡಿದ ಆರೋಪದ ಮೇಲೆ ನಿರ್ದೇಶಕ ಸೇರಿ ನಾಲ್ವರನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ನಿರ್ದೇಶಕ ಸಂತೋಷ್, ಪ್ರಶಾಂತ್, ಸುರೇಶ್ ಹಾಗೂ ಪ್ರದೀಪ್ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ದಂಪತಿಯ ಖಾಸಗಿ ಚಿತ್ರ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಸಿದಲ್ಲದೆ, 5 ಕೋಟಿ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಸಂತೋಷ್ ರಾಜಾರಾಣಿ ಚಲನಚಿತ್ರದ ನಿರ್ದೇಶನ ಮಾಡಲು ಪ್ರಯತ್ನಿಸುತ್ತಿದ್ದು, ಚಿತ್ರವನ್ನು ನಿರ್ಮಾಣ ಮಾಡಲು ದಂಪತಿ ಹತ್ತಿರ ಹಣ ಕೇಳಿದ್ದರು. ಆದರೆ, ದಂಪತಿ ಹಣ ಕೊಡಲು ನಿರಾಕರಿಸಿದ್ದರು. ಆಗ ಅವರ ಮೊಬೈಲಿನಿಂದ ಖಾಸಗಿ ದೃಶ್ಯ ಕಳವು ಮಾಡಿದ್ದನು. ಬಳಿಕ ಆರೋಪಿ ಹಣ ನೀಡುವಂತೆ ಒತ್ತಾಯ ಮಾಡಿ ಬೆದರಿಕೆ ಹಾಕಿದ್ದನು ಎಂದು ತಿಳಿದುಬಂದಿದೆ.
Next Story