ಬೆಂಗಳೂರು: ಬೋನಿಗೆ ಬಿದ್ದ ಚಿರತೆ
ಬೆಂಗಳೂರು, ಜು.28: ಕೋಳಿ ತಿನ್ನಲು ಬಂದ ಚಿರತೆಯೊಂದು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಮಾಗಡಿ ತಾಲೂಕಿನ ಹೊನ್ನಸಿದ್ದಯ್ಯನ ಪಾಳ್ಯದ ಗಿರೀಶ್ ಎಂಬುವರ ತೋಟದಲ್ಲಿ ಕೋಳಿ ಸಾಕಾಣಿಕೆ ಕೇಂದ್ರಕ್ಕೆ ನುಗ್ಗಿದ ಚಿರತೆ ಬೋನಿಗೆ ಸಿಲುಕಿದೆ.
ನಾಲ್ಕು ದಿನಗಳ ಹಿಂದೆ ಮಾಗಡಿ ವಲಯ ಅರಣ್ಯಾಧಿಕಾರಿಗಳು ಗಿರೀಶ್ ಎಂಬುವವರ ತೋಟಕ್ಕೆ ಆಗಾಗ್ಗೆ ದಾಳಿ ಮಾಡುತ್ತಿದ್ದ ಚಿರತೆ ಹಿಡಿಯಲು ಬೋನು ಇರಿಸಿದ್ದರು. ರಾತ್ರಿ ಬೋನಿಗೆ ಸಿಲುಕಿದ್ದ ಚಿರತೆಯನ್ನು ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಬನ್ನೇರುಘಟ್ಟ ಅರಣ್ಯಕ್ಕೆ ಕರೆದೊಯ್ದಿದ್ದಾರೆ.
Next Story