2008ರ ಬೆಂಗಳೂರು ಸ್ಫೋಟ ಆರೋಪ ಪ್ರಕರಣ: ದಿಢೀರ್ ಎಸ್ಪಿಪಿ ಬದಲು ಏಕೆ; ಶಂಕರ್ ಬಿದರಿ ಪ್ರಶ್ನೆ
ಬೆಂಗಳೂರು, ನ.4: 2008ನೇ ಸಾಲಿನಲ್ಲಿ ಬೆಂಗಳೂರಿನಲ್ಲಿ ನಡೆದ ಸ್ಫೋಟ ಪ್ರಕರಣ ಸಂಬಂಧ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಪಿಪಿ) ಬದಲು ಮಾಡಿದ್ದೇಕೆ ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಬಿದರಿ ಪ್ರಶ್ನೆ ಮಾಡಿದ್ದಾರೆ.
ಈ ಕುರಿತು ಟ್ವಿಟ್ನಲ್ಲಿ ಹೇಳಿರುವ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ, ತನಿಖಾ ನಿರತ ಎಸ್ಪಿಪಿ ಬದಲಾವಣೆಗೆ ಕಾರಣವೇನು? ವಾದ- ಪ್ರತಿವಾದ ಮುಕ್ತಾಯವಾಗಿ ಆರೋಪಿಗೆ ಶಿಕ್ಷೆವಿಧಿಸುವ ಸಂದರ್ಭದಲ್ಲಿ ಎಸ್ಪಿಪಿ ಬದಲು ಮಾಡಿದ್ದೇಕೆ. ಆರೋಪಿಗಳು ಪ್ರಕರಣದಿಂದ ಖುಲಾಸೆ ಮಾಡಲು ಈ ರೀತಿ ಏನಾದರೂ ಮಾಡಿದ್ದೀರಾ ಎಂದು ರಾಜ್ಯ ಸರಕಾರಕ್ಕೆ ಕೇಳಿದ್ದಾರೆ.
ಏನಿದು ಪ್ರಕರಣ?: 2008ರಲ್ಲಿ ಶಂಕರ್ ಬಿದರಿ ಅವರು ನಗರದ ಪೊಲೀಸ್ ಆಯುಕ್ತರಾಗಿ ಕೆಲಸ ನಿರ್ವಹಿಸುತ್ತಿದ್ದರು. ಈ ಸಂದರ್ಭದಲ್ಲಿ ಮಡಿವಾಳ, ಆಡುಗೋಡಿ ಭಾಗಗಳಲ್ಲಿ ಸರಣಿ ಬಾಂಬ್ ಸ್ಫೋಟ ನಡೆದಿತ್ತು.
Next Story