ಸಂಗೀತ ನಿರ್ದೇಶಕ ರಾಜನ್, ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ ಬರಗೂರು ಪ್ರಶಸ್ತಿಗೆ ಆಯ್ಕೆ
ಬೆಂಗಳೂರು, ಜ.17: ನಾಡೋಜ ಡಾ.ಬರಗೂರು ಪ್ರತಿಷ್ಠಾನವು ಪ್ರತಿವರ್ಷ ಕೊಡಮಾಡುವ ಬರಗೂರು ಪ್ರಶಸ್ತಿಗೆ ಸಿನಿಮಾ ಕ್ಷೇತ್ರದ ಸಂಗೀತ ನಿರ್ದೇಶಕ ರಾಜನ್(ನಾಗೇಂದ್ರ) ಹಾಗೂ ಹಿರಿಯ ಲೇಖಕ ದೊಡ್ಡಹುಲ್ಲೂರು ರುಕ್ಕೋಜಿ ಭಾಜನರಾಗಿದ್ದಾರೆ.
ಹಾಗೆಯೆ ಶ್ರೀಮತಿ ರಾಜಲಕ್ಷ್ಮೀ ಬರಗೂರು ಪುಸ್ತಕ ಪ್ರಶಸ್ತಿಗೆ ಡಾ.ಕೆ.ಎಸ್.ಕುಮಾರಸ್ವಾಮಿ ಅವರ ‘ಪುರಾಣ ಪ್ರಪಂಚಾರಣ್ಯದಲ್ಲಿ ರಾಕ್ಷಸರು ಮತ್ತು ಸೈಂಧವತೆ’, ಲೇಖಕ ಚೀಮನಹಳ್ಳಿ ರಮೇಶ್ಬಾಬು ಅವರ ‘ಟೈರ್ಸಾಮಿ’ ಹಾಗೂ ಶ್ರೀಧರ ಬನವಾಸಿ ಅವರ ‘ಬೇರು’ ಕಾದಂಬರಿಗಳನ್ನು ಆಯ್ಕೆಯಾಗಿವೆ.
ಬರಗೂರು ಪ್ರಶಸ್ತಿಯು 25ಸಾವಿರ ರೂ.ನಗದು ಪುರಸ್ಕಾರ, ಪ್ರಶಸ್ತಿ ಫಲಕ ಹಾಗೂ ಶ್ರೀಮತಿ ರಾಜಲಕ್ಷ್ಮೀ ಬರಗೂರು ಪ್ರಶಸ್ತಿ 10ಸಾವಿರ ರೂ. ಪುರಸ್ಕಾರ ಮತ್ತು ಪ್ರಶಸ್ತಿ ಪುರಸ್ಕಾರ ಒಳಗೊಂಡಿರುತ್ತೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story