ಮದ್ಯದ ಅಮಲಿನಲ್ಲಿ ಮಹಿಳೆಯ ಕೊಲೆ: ಆರೋಪಿ ಬಂಧನ
ಬೆಂಗಳೂರು, ಮೇ 11: ಮದ್ಯದ ಅಮಲಿನಲ್ಲಿ ಮಹಿಳೆಯನ್ನು ಕೊಲೆಗೈದಿದ್ದ ಪ್ರಕರಣ ಸಂಬಂಧ ಆರೋಪಿಯನ್ನು ಇಲ್ಲಿನ ಸುಬ್ರಮಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಭರತ್ ಎಂಬಾತ ಕೊಲೆ ಆರೋಪಿ ಎಂದು ತಿಳಿದುಬಂದಿದೆ. ದೊಡ್ಡಕಲ್ಲಸಂದ್ರದ ಭಾಗ್ಯಮ್ಮ ಎಂಬುವವರು ವಾಸವಿದ್ದು, ಇವರ ಮನೆಯ ಕೆಳಮನೆಯಲ್ಲಿ ಭರತ್ ಎಂಬ ವ್ಯಕ್ತಿ ವಾಸವಿದ್ದ ಎಂದು ಹೇಳಲಾಗುತ್ತಿದೆ.
ಮೇ 5ರಂದು ಈತ ಸ್ನೇಹಿತರನ್ನು ಮನೆಗೆ ಕರೆದು ಮದ್ಯ ಸೇವನೆ ಮಾಡಿದ್ದ. ಇದರಿಂದ ಬೇಸತ್ತು ಭಾಗ್ಯಮ್ಮ ಬುದ್ದಿ ಮಾತು ಹೇಳಿದ್ದರು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ಭರತ್ ಚಾಕುವಿನಿಂದ ಭಾಗ್ಯಮ್ಮ ಮೇಲೆ ಹಲ್ಲೆ ನಡೆಸಿದ ಪರಿಣಾಮ ಆಕೆ ಮೃತಪಟ್ಟಿದ್ದಾಳೆ ಎನ್ನಲಾಗಿದೆ.
ಈ ಸಂಬಂಧ ತನಿಖೆ ನಡೆಸಿದ ಸುಬ್ರಮಣ್ಯಪುರ ಠಾಣಾ ಪೊಲೀಸರು, ಆರೋಪಿ ಭರತ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Next Story