ಕಳವು ಪ್ರಕರಣ: 9 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ
ಬೆಂಗಳೂರು, ಜು.18: ಹಗಲು-ರಾತ್ರಿ ಕನ್ನ ಕಳವು ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಿರುವ ಹೆಬ್ಬಾಳ ಠಾಣಾ ಪೊಲೀಸರು, 9 ಲಕ್ಷ ಬೆಲೆ ಬಾಳುವ ಮಾಲು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತಮಿಳುನಾಡು ಮೂಲದ ಆದಿಲ್ ಆದಿಲ್ ಖಾನ್(23) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.
ಕನಕನಗರದ 5ನೆ ಮುಖ್ಯರಸ್ತೆಯಲ್ಲಿರುವ ತಮ್ಮ ಮನೆಗೆ ಬೀಗ ಹಾಕಿಕೊಂಡು ರಂಝಾನ್ ಆಚರಿಸಲು ಉತ್ತರ ಭಾರತಕ್ಕೆ ಇಫ್ತಿಕಾರ್ ಅಹ್ಮದ್ ಎಂಬುವರು ಹೋಗಿದ್ದರು. ಬಳಿಕ, ವಾಪಸ್ಸು ಬಂದು ನೋಡಿದಾಗ ಮನೆ ಬಳಿಯ ಕಾರು, ಮನೆಯೊಳಗಿನ ಚಿನ್ನಾಭರಣ, ನಗದು, ಹಲವು ವಸ್ತುಗಳು ಕಳ್ಳತನವಾಗಿತ್ತು. ಈ ಸಂಬಂಧ ದೂರು ನೀಡಲಾಗಿತ್ತು.
ದೂರಿನ್ವಯ ತನಿಖೆ ನಡೆಸಿದ ಪೊಲೀಸರು, ಆರೋಪಿಯನ್ನು ಬಂಧಿಸಿ ಕಾರು, ಚಿನ್ನಾಭರಣ ಸೇರಿ 9 ಲಕ್ಷ ರೂ. ಮೌಲ್ಯದ ಮಾಲು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
Next Story