ಕೆಎಸ್ಸಾರ್ಟಿಸಿ ಚಾಲಕನಿಗೆ 1 ಸಾವಿರ ರೂ. ದಂಡ
ಬೆಂಗಳೂರು, ಆ.31: ಸಂಚಾರಕ್ಕೆ ಅಡ್ಡಿಯಾಗುವಂತೆ ಬಸ್ ನಿಲುಗಡೆ ಆರೋಪ ಸಂಬಂಧ ಕೆಎಸ್ಸಾರ್ಟಿಸಿ ಬಸ್ ಚಾಲಕನಿಗೆ ಸಂಚಾರ ಪೊಲೀಸರು 1 ಸಾವಿರ ರೂ. ದಂಡ ವಿಧಿಸಿದ್ದಾರೆ.
ಬೆಂಗಳೂರಿನಿಂದ ಕೆಜಿಎಫ್ಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್, ಇಲ್ಲಿನ ಕೆಆರ್ ಪುರ ತೂಗು ಸೇತುವೆ ಬಳಿ ನಿಲ್ಲಿಸಿದ್ದು, ಸಂಚಾರಕ್ಕೆ ತೊಂದರೆಯಾಗಿತ್ತು. ಹೀಗಾಗಿ, ಕೆ.ಆರ್ ಪುರ ಸಂಚಾರಿ ಠಾಣೆಯ ಪೊಲೀಸರು ಬಸ್ ಚಾಲಕ ಸುಂದರಮೂರ್ತಿಗೆ 1 ಸಾವಿರ ರೂ.ದಂಡ ವಿಧಿಸಿದ್ದಾರೆ.
Next Story