ಬೆಂಗಳೂರು ಹಿಂಸಾಚಾರ ಪ್ರಕರಣ: ಇದುವರೆಗೂ ಒಟ್ಟು 68 ಅಫಿಡವಿಟ್ ಸಲ್ಲಿಕೆ
ಬೆಂಗಳೂರು, ಸೆ.8: ಡಿಜೆ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ಬೆಂಗಳೂರು ನಗರ ಜಿಲ್ಲಾ ಮ್ಯಾಜಿಸ್ಟ್ರೇಟ್ ತನಿಖೆ ವಿಚಾರಣೆ ಹಂತಕ್ಕೆ ತಲುಪಿಸಿದ್ದು, ಇದುವರೆಗೂ 68 ಅಫಿಡವಿಟ್ ಸಲ್ಲಿಕೆಯಾಗಿದೆ.
ಪ್ರಕರಣ ಸಂಬಂಧ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ವಿಚಾರಣೆ ಪ್ರಕ್ರಿಯೆ ನಡೆಯುತ್ತಿದ್ದು, 60ಕ್ಕೂ ಹೆಚ್ಚು ಮಂದಿ ತಮ್ಮ ಹೇಳಿಕೆಗಳನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸಿದರು.
ಸಲ್ಲಿಕೆಯಾದ ಪ್ರಮಾಣ ಪತ್ರ, ಅರ್ಜಿಗಳ ಪರಿಶೀಲನೆ ನಂತರ ಮುಂದಿನ ವಿಚಾರಣೆಗೆ ದಿನಾಂಕ ನಿಗದಿಪಡಿಸುವುದಾಗಿ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಘೋಷಿಸಿ, ವಿಚಾರಣೆ ಹಂತವನ್ನು ಮುಂದೂಡಿಕೆ ಮಾಡಿದರು.
Next Story