ವ್ಯಾಪಾರದಲ್ಲಿ ನಷ್ಟ: ಬಿಬಿಎಂಪಿ ಕ್ಯಾಂಟೀನ್ ಮಾಲಕ ನೇಣಿಗೆ ಶರಣು
ಬೆಂಗಳೂರು, ಸೆ. 13: ವ್ಯಾಪಾರದಲ್ಲಿನ ನಷ್ಟದ ಹಿನ್ನೆಲೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೇಂದ್ರ ಕಚೇರಿ ಆವರಣದಲ್ಲಿರುವ ಕ್ಯಾಂಟಿನ್ ಮಾಲಕ ಲಿಂಗರಾಜು ರವಿವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಿಬಿಎಂಪಿ ಆವರಣದಲ್ಲಿ ಕಳೆದ 24 ವರ್ಷಗಳಿಂದ ಕ್ಯಾಂಟಿನ್ ನಡೆಸುತ್ತಿದ್ದ ಲಿಂಗರಾಜು ನಗರದ ಬೈಲುಸಂದ್ರದ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇತ್ತೀಚೆಗೆ ಬಿಬಿಎಂಪಿ ಬೇರೆ ಕ್ಯಾಂಟಿನ್ ನಡೆಸಲು ಅವಕಾಶ ಮಾಡಿಕೊಟ್ಟಿದ್ದರಿಂದ ಲಿಂಗರಾಜು ಅವರು ಕ್ಯಾಂಟಿನ್ ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿದ್ದರು. ಅಲ್ಲದೇ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಹತಾಶೆಗೊಂಡು ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ.
Next Story