ಪರಪ್ಪನ ಅಗ್ರಹಾರದಲ್ಲಿ ಯುವಕರಿಗೆ ಹಿಂಸೆ: ಆರೋಪ
ಬೆಂಗಳೂರು, ನ,5: ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ ಜೈಲಿನಲ್ಲಿ 18ರಿಂದ 21 ವಯಸ್ಕರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ.
ಕಾರಾಗೃಹ ಕೇಂದ್ರದ ಶಾಲೆಯ ಬ್ಯಾರಕ್ನಲ್ಲಿಡಬೇಕಾದ್ದ ಯುವಕರನ್ನು ಸಾಮಾನ್ಯ ಬ್ಯಾರಕ್ಗೆ ಹಾಕಲಾಗಿದೆ. ಅವರನ್ನು ಶೀಘ್ರವಾಗಿ ಬದಲಾವಣೆ ಮಾಡುವಂತೆ ಕೋರಿ ಕಾರಾಗೃಹದ ಕೈದಿಯೊರ್ವರು ಗೃಹ ಇಲಾಖೆಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಈ-ಜನಸ್ಪಂದನಾ ಮೂಲಕ ದೂರು ರವಾನಿಸಲಾಗಿದೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಜೈಲಾಧಿಕಾರಿಗಳು, ಕೋವಿಡ್-19 ಇದ್ದ ಕಾರಣ ಶಾಲಾ ಬ್ಯಾರಕ್ನಲ್ಲಿಡಲು ಆಗಿಲ್ಲ. ವಯಸ್ಕ ಕೈದಿಗಳನ್ನು ಬೇರೆ ಬ್ಯಾರಕ್ಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಇನ್ನು, ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಇಲಾಖೆ ಕಾರ್ಯದರ್ಶಿ ಡಿ. ರೂಪಾ, ನನಗೆ ಈವರೆಗೆ ಆ ರೀತಿ ದೂರಿನ ಪ್ರತಿ ಬಂದಿಲ್ಲ. ನಾನು ಜೈಲಾಧಿಕಾರಿಯಾಗಿದ್ದಾಗ ಆ ರೀತಿ ಯಾವುದೇ ದೂರು ಇರಲಿಲ್ಲ. ಒಂದು ವೇಳೆ ಗೃಹ ಇಲಾಖೆಗೆ ದೂರು ಬಂದರೆ, ತಕ್ಷಣ ಆ ಬಗ್ಗೆ ನಾನು ವರದಿ ಕೇಳಿ, ಸತ್ಯಾಸತ್ಯತೆ ತಿಳಿದು ಕ್ರಮ ಜರುಗಿಸುತ್ತೇನೆ ಎಂದು ಹೇಳಿದ್ದಾರೆ.