ತುಮಕೂರು ವಾರ್ತಾಧಿಕಾರಿ ಡಿ. ಮಂಜುನಾಥ್ ಕೋವಿಡ್ ಗೆ ಬಲಿ
ಬೆಂಗಳೂರು : ತುಮಕೂರು ಜಿಲ್ಲಾ ವಾರ್ತಾಧಿಕಾರಿ ಡಿ. ಮಂಜುನಾಥ್ (42) ಕೋವಿಡ್-19 ಸೋಂಕಿನಿಂದ ನಿಧನರಾದರು.
ಕೊರೋನ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕೆಲ ದಿನಗಳ ಹೋಮ್ ಐಸೋಲೇಷನ್ ಆಗಿದ್ದ ಮಂಜುನಾಥ್, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ರವಿವಾರ ಬೆಳಗಿನಜಾವ ನಿಧನರಾಗಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.
ದೊಡ್ಡ ಬಳ್ಳಾಪುರ ಸಮೀಪದ ನೆಲಕುಂಟೆ ಗ್ರಾಮದ ಮಂಜುನಾಥ್, ಎರಡು ವರ್ಷಗಳ ಹಿಂದೆಯಷ್ಟೇ ವಿವಾಹವಾಗಿದ್ದ ಅವರು ಪತ್ನಿ, ಚಿಕ್ಕ ಮಗು ಸಹಿತ ಅಪಾರ ಸಂಖ್ಯೆಯ ಬಂಧು- ಮಿತ್ರರನ್ನು ಅಗಲಿದ್ದಾರೆ.
ಸಂಜೆವಾಣಿ, ಕರುನಾಡ ಸಂಜೆ, ಇಂದು ಸಂಜೆ, ವಾರ್ತಾಭಾರತಿ ಸಹಿತ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ಮಂಜುನಾಥ್ ನಿಧನಕ್ಕೆ ಕಾರ್ಯನಿರತ ಪತ್ರಕರ್ತರ ಸಂಘ ಸಹಿತ ಮಾಧ್ಯಮ ಮಿತ್ರರು ಸಂತಾಪ ಸೂಚಿಸಿದ್ದಾರೆ.
Next Story