ಬಿಜೆಪಿ ಬ್ಯಾನರ್ ಮುಂದೆ ನಿಂತು ಸರಕಾರದ ರೇಷನ್ ಕಿಟ್ ಹಂಚಿಕೆ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಕಿಡಿ
ಬೆಂಗಳೂರು, ಜು.11: ಬಿಜೆಪಿ ಬ್ಯಾನರ್ ಮುಂದೆ ನಿಂತು ಸರಕಾರದಿಂದ ಕೊಡಮಾಡುವ ರೇಷನ್ ಕಿಟ್ ಹಂಚಿರುವ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಸರಕಾರಿ ಲಸಿಕೆಯ ಬಾಟಲಿಗೆ ತಮ್ಮ ಫೊಟೋ ಅಂಟಿಸಿ ಹಣಕ್ಕೆ ಮಾರಿಕೊಂಡಿದ್ದ ಸಂಸದ ತೇಜಸ್ವಿ ಸೂರ್ಯ, ಈಗ ಬಿಜೆಪಿ ಬ್ಯಾನರ್ ಮುಂದೆ ನಿಂತು ರೇಷನ್ ಕಿಟ್ಗಳನ್ನು ಹಂಚಿದ್ದಾರೆಂದು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಕಾರ್ಮಿಕ ಇಲಾಖೆಯ ಕಿಟ್ಗಳಿಗೆ ತಮ್ಮ ಫೋಟೋ ಅಂಟಿಸಿ ಹಂಚಿದ್ದಾರೆ. ಈ ಬಿಜೆಪಿ ನಾಯಕರಿಗೆ ಅಧಿಕಾರದ ದುರ್ಬಳಕೆ ಮಾಡಿಕೊಳ್ಳುವುದಕ್ಕೂ ಒಂದು ಮಿತಿ ಬೇಡವೇ ಎಂದು ಕಾಂಗ್ರೆಸ್ ತರಾಟೆಗೆ ತೆಗೆದುಕೊಂಡಿದೆ.
ಸರ್ಕಾರದ ದುಡ್ಡು, ಬಿಜೆಪಿಯ ಜಾತ್ರೆ!
— Karnataka Congress (@INCKarnataka) July 11, 2021
ಸರ್ಕಾರಿ ಲಸಿಕೆಯನ್ನ ತನ್ನ ಫೋಟೋ ಅಂಟಿಸಿ ಹಣಕ್ಕೆ ಮಾರಿಕೊಂಡ @Tejasvi_Surya ಈಗ ಸರ್ಕಾರದ ರೇಷನ್ ಕಿಟ್ಗಳನ್ನ ಬಿಜೆಪಿ ಬ್ಯಾನರ್ ಮುಂದೆ ಹಂಚಿದ್ದಾರೆ.@JagadishShettar ಕಾರ್ಮಿಕ ಇಲಾಖೆ ಕಿಟ್ಗಳಿಗೆ ತಮ್ಮ ಫೋಟೋ ಅಂಟಿಸಿ ಹಂಚಿದ್ದಾರೆ.
ಅಧಿಕಾರ ದುರ್ಬಳಕೆಗೆ ಮಿತಿ ಬೇಡವೇ @BJP4Karnataka? pic.twitter.com/WpjUMhRtoI