ಸಿಲಿಕಾನ್ ಸಿಟಿಯಲ್ಲಿ ಮಹಾಮಳೆ: ಧರೆಗುರಳಿದ 5 ಮರಗಳು
ಬೆಂಗಳೂರು, ಅ.17: ನಗರದಲ್ಲಿ ಶನಿವಾರ ತಡರಾತ್ರಿ ಸುರಿದ ಮಹಾಮಳೆಗೆ ನಗರದ ವಿವಿಧೆಡೆ ಮರಗಳು ನೆಲಕ್ಕುರಳಿವೆ.
ನಗರದ ಮಲ್ಲೇಶ್ವರಂನಲ್ಲಿ ಒಂದು ಮರ, ಕುಮಾರಸ್ವಾಮಿ ಲೇಔಟ್ನಲ್ಲಿ ಒಂದು ಮರ, ಬನ್ನೇರುಘಟ್ಟ ರಸ್ತೆಯ ಅಯ್ಯಪ್ಪ ಟೆಂಪಲ್ ಬಳಿ ಒಂದು ಮರ, ಜಯನಗರ ಮೂರನೇ ಬ್ಲಾಕ್ನಲ್ಲಿ ಮತ್ತು ಜಯನಗರದ 9ನೇ ಬ್ಲಾಕ್ನಲ್ಲಿ ತಲಾ ಒಂದು ಮರ ನೆಲಕ್ಕುರಳಿವೆ. ರವಿವಾರ ಮುಂಜಾನೆ ಬಿಬಿಎಂಪಿ ಸಿಬ್ಬಂದಿ ಸ್ಥಳಕ್ಕೆ ಹೋಗಿ ನೆಲಕ್ಕೆ ಉರುಳಿದ ಮರಗಳನ್ನು ತೆರವುಗೊಳಿಸಿದರು ಎಂದು ಬಿಬಿಎಂಪಿ ತಿಳಿಸಿದೆ.
Next Story