ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆಗೆ ಸಂಚು ಆರೋಪ: ಗೋಪಾಲಕೃಷ್ಣ ವಿಚಾರಣೆಗೆ ಹಾಜರು
ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್
ಬೆಂಗಳೂರು, ಡಿ.4: ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿದ್ದ ಆರೋಪ ಸಂಬಂಧ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣನನ್ನು ಪೊಲೀಸರು ವಿಚಾರಣೆಗೊಳಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ವಶಕ್ಕೆ ಪಡೆದಿರುವ ಆರೋಪಿ ಕುಳ್ಳದೇವರಾಜ್ ನೀಡಿದ ಕ್ಷಮಾಪಣೆ ಪತ್ರ ಮತ್ತು ಸಂಚು ನಡೆಸಿದ ವಿಡಿಯೊವನ್ನು ಪೊಲೀಸರಿಗೆ ಎಸ್.ಆರ್. ವಿಶ್ವನಾಥ್ ನೀಡಿದ್ದರು.
ಇದರನ್ವಯ ಶನಿವಾರ ವಿಚಾರಣೆಗಾಗಿ ಹಾಜರಾದ ಗೋಪಾಲಕೃಷ್ಣರನ್ನು ರಾಜಾನುಕುಂಟೆ ಠಾಣಾ ಪೊಲೀಸರು, ವಿಡಿಯೊ ಕುರಿತು ಲಿಖಿತ ಹೇಳಿಕೆ ಪಡೆದರು ಎಂದು ತಿಳಿದುಬಂದಿದೆ.
Next Story