ಬೆಂಗಳೂರು; ಸ್ನೇಹಿತನಿಗೆ ಡೆತ್ ನೋಟ್ ಕಳಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ
ಜೀವ ಉಳಿಸಲು ನೆರವಾದ 112 ಸಹಾಯವಾಣಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ಜೂ.28: ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ 112 ಸಹಾಯವಾಣಿಯಿಂದ ಪಾರಾಗಿರುವ ಘಟನೆ ಜೆ.ಪಿನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಖಿನ್ನತೆಯಿಂದ ಬಳಲುತ್ತಿದ್ದ ತಾನು ಎಂಬಾತ ಯುವಕ ಜೆ.ಪಿ.ನಗರದ ವಾಸವಾಗಿದ್ದ ಪಿ.ಜಿಯಲ್ಲಿ ಯಾರೂ ಇಲ್ಲದಿದ್ದಾಗ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆತ್ಮಹತ್ಯೆ ಯತ್ನಕ್ಕೂ ಮುನ್ನ ಸ್ನೇಹಿತನಿಗೆ ಡೆತ್ ನೋಟ್ ರವಾನಿಸಿದ್ದು, ಹೊರಗಡೆಯಿದ್ದ ಕಾರಣ ಯುವಕನ ಸ್ನೇಹಿತ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.
ತಕ್ಷಣವೇ ಪಿ.ಜಿಗೆ ತೆರಳಿದ ಜೆ.ಪಿ.ನಗರ ಠಾಣಾ ಹೊಯ್ಸಳ ಸಿಬ್ಬಂದಿ ರಕ್ತಸ್ರಾವದಿಂದ ಅಸ್ವಸ್ಥನಾಗಿದ್ದ ಯುವಕನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಪಡೆಯುತ್ತಿರುವ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
Next Story