ಹಿಂದೂ ವಿವಾಹಿತ ಪುರುಷರಿಗೆ ಡೈವರ್ಸ್ ವಿಚಾರವಾಗಿ ಮಹಿಳೆಯರಿಂದ ಕಿರುಕುಳ: ಎಸ್. ಲಕ್ಷ್ಮೀನಾರಾಯಣ ಆರೋಪ
ಬೆಂಗಳೂರು, ಜೂ.28: ಹಿಂದೂ ವಿವಾಹಿತ ಪುರುಷರು ಡೈವರ್ಸ್ ವಿಚಾರವಾಗಿ ಅನೇಕ ಕಿರುಕುಳಗಳನ್ನು ಎದುರಿಸುತ್ತಿದ್ದಾರೆ. ಯಾವ ತಪ್ಪು ಎಸಗದೆ ಇರುವ ಪುರುಷರ ಮೇಲೆ ಸುಖಾಸುಮ್ಮನೆ ಪ್ರಕರಣಗಳನ್ನು ದಾಖಲಿಸಿ ಮಹಿಳೆಯರು ತಮ್ಮ ಸ್ವಾರ್ಥಕ್ಕಾಗಿ ಪುರುಷರನ್ನು ತಂದೆ-ತಾಯಿಯರಿಂದ ಬೇರೆ ಮಾಡುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಸಾಮಾನ್ಯ ನಾಗರಿಕ ಧ್ವನಿ ವೇದಿಕೆಯ ರಾಜ್ಯ ಅಧ್ಯಕ್ಷ ಎಸ್. ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.
ಮಂಗಳವಾರ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, ಹಿಂದೂ ವಿವಾಹಿತ ಪುರುಷರು ಹಗಲು ರಾತ್ರಿ ಯಾವುದೇ ಸ್ವಾರ್ಥ ಇಲ್ಲದೆ, ತನ್ನ ಮನೆಯ ಏಳಿಗೆಗಾಗಿ ದುಡಿದು ಸಂಪಾದಿಸಿಟ್ಟ ಹಣವನ್ನು ಡೈವರ್ಸ್ ಪ್ರಕರಣದಲ್ಲಿ ಪರಿಹಾರದ ರೂಪದಲ್ಲಿ ಮಹಿಳೆಯರಿಗೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಮಾರ್, ರಾಚಪ್ಪಾಜಿ ಎಸ್, ಶಂಕರ್ ಆರ್, ಹರೀಶ್, ಸಂತೋಷ್ ಕುಮಾರ್ ಬಿ.ಎನ್ ಮುಂತಾದವರು ಉಪಸ್ಥಿತರಿದ್ದರು.
Next Story