ನಿಂದನೆ ಆರೋಪ: ಬಿಜೆಪಿ ನಾಯಕ ಕೆ.ಎನ್.ಚಕ್ರಪಾಣಿ ವಿರುದ್ಧ ಎಫ್ಐಆರ್
ಬೆಂಗಳೂರು, ಜೂ.30: ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ ಸಂಬಂಧ ಬಿಜೆಪಿ ಹಿರಿಯ ನಾಯಕ ಕೆ.ಎನ್.ಚಕ್ರಪಾಣಿ ವಿರುದ್ಧ ಇಲ್ಲಿನ ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.
ಶ್ರೀಧರ್ ಮೂರ್ತಿ ಎಂಬುವರಿಂದ ದೂರು ದಾಖಲು ಮಾಡಿದ್ದು, ಈ ಸಂಬಂಧ ಕೆ.ಎನ್. ಚಕ್ರಪಾಣಿ ವಿರುದ್ಧ ಐಪಿಸಿ ಸೆಕ್ಷನ್ 143, 448, 323, 504, 506 ಅಡಿ ಮೊಕದ್ದಮೆ ದಾಖಲಾಗಿದೆ.
ಕೊಡಿಗೇಹಳ್ಳಿ ವಿರೂಪಾಕ್ಷಪುರದ ಚಕ್ರಪಾಣಿ ಮನೆ ಮುಂಭಾಗ ಶ್ರೀಧರ್ ಮೂರ್ತಿ ಅಪಾಟ್ಮೆರ್ಂಟ್ ಇದ್ದು, ಇತ್ತೀಚಿಗೆ ಮುಖ್ಯ ದ್ವಾರ ದುರಸ್ತಿ ಕಾರ್ಯ ನಡೆಯುತಿತ್ತು. ಆದರೆ, ಉದ್ದೇಶಪೂರ್ವಕವಾಗಿ ಶ್ರೀಧರ್ ಮೂರ್ತಿ ಅವರನ್ನು ಬೆದರಿಸಿ ಮುನಿರಾಜು ಸೇರಿ 12 ಜನರನ್ನು ಕರೆತಂದು ಗಲಾಟೆ ಮಾಡಿದ್ದಾರೆ. ಈ ವೇಳೆ ನಿಂದನೆ ಮಾಡಿದಲ್ಲದೆ, ಹಲ್ಲೆ ನಡೆಸಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
Next Story