ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವವರಿಗೆ ನನ್ನ ಮತ: ನಟಿ ರಮ್ಯಾ ಟ್ವೀಟ್
ರಮ್ಯಾ
ಬೆಂಗಳೂರು: ತಡರಾತ್ರಿ ಸುರಿದ ಮಳೆಗೆ ಬೆಂಗಳೂರು ನಗರದ ಹಲವು ರಸ್ತೆಗಳಲ್ಲಿ ನೀರು ನಿಂತಿರುವ ಹಿನ್ನೆಲೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು, ಈ ಕುರಿತು ನಟಿ, ಮಾಜಿ ಸಂಸದೆ ರಮ್ಯಾ (Ramya) ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಅಂತ ಬರೆದು ರಸ್ತೆಗಳಲ್ಲಿ ನಿಂತಿರುವ ಮಳೆ ನೀರಿನ ಫೋಟೋ ಪೋಸ್ಟ್ ಮಾಡಿ ಬೆಂಗಳೂರು ‘ಸ್ಮಾರ್ಟ್ ಸಿಟಿ’ ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ, 'ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವವರಿಗೆ ನನ್ನ ಮತ' ಎಂದು ಹೇಳಿದ್ದಾರೆ.
ಬೆಂಗಳೂರು ನಗರದ ವಿವಿಧೆಡೆಯಲ್ಲಿ ಮಳೆ ನೀರಿನಿಂದ ನೆರೆ ಪರಿಸ್ಥಿತಿ ಉಂಟಾಗಿದ್ದು, ರಾಜಕಾಲುವೆ ಒತ್ತುವರಿ ಮಾಡಿಕೊಂಡು ಅಕ್ರಮ ಕಟ್ಟಡ ನಿರ್ಮಿಸಿದ್ದರಿಂದ ಕೃತಕ ನೆರೆ ರಾಜಧಾನಿಯಲ್ಲಿ ಉದ್ಭವವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ>>> ಮನೆಯಿಂದಲೇ ಕೆಲಸ ಮಾಡಿ, ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ: ಬೆಂಗಳೂರು ಸಂಚಾರ ಪೊಲೀಸರ ಮನವಿ
Very smart city!! My vote is for the govt that will clamp down on illegal construction #Nammabengaluru pic.twitter.com/2uiEGkFTXv
— Divya Spandana/Ramya (@divyaspandana) September 5, 2022