ಬೆಂಗಳೂರು | ಸಿಗ್ನಲ್ ಜಂಪ್ ಮಾಡಿ ಸ್ವಇಚ್ಛೆಯಿಂದ ದಂಡ ಪಾವತಿಗೆ ಮುಂದೆ ಬಂದ ವಾಹನ ಸವಾರ!
ಟ್ವೀಟ್ ಮೂಲಕ ಪೊಲೀಸರಲ್ಲಿ ಮನವಿ
ಬೆಂಗಳೂರು, ಸೆ.29: ಸಂಚಾರ ನಿಯಮ ಉಲ್ಲಂಘನೆ(ಟ್ರಾಫಿಕ್ ಸಿಗ್ನಲ್ ಜಂಪ್) ಮಾಡಿದ ವ್ಯಕ್ತಿಯೊರ್ವ ಪಶ್ಚಾತಾಪ ಪಟ್ಟು, ಪೊಲೀಸರಿಗೆ ದಂಡ ಪಾವತಿಸುವುದಾಗಿ ಹೇಳಿದ್ದಾನೆ.
ಬಾಲಕೃಷ್ಞ ಬಿರ್ಲಾ ಎಂಬುವರು ಬೆಂಗಳೂರಿನ ಶಾಂತಿನಗರ ಬಸ್ ನಿಲ್ದಾಣ ಬಳಿ ಟ್ರಾಫಿಕ್ ಸಿಗ್ನಲ್ ದಾಟಿ ನಿಯಮ ಉಲ್ಲಂಘಿಸಿದ್ದು ಮನೆಗೆ ಬಂದಾಗ ಪಶ್ಚಾತಾಪ ಪಟ್ಟಿದ್ದಾರೆ. ತಪ್ಪಿನ ಅರಿವಾದ ಬಳಿಕ ಕೂಡಲೇ ಸಂಚಾರ ಉಲ್ಲಂಘನೆ ಮಾಡಿದ್ದೇನೆ, ಸ್ವಯಂಪ್ರೇರಿತವಾಗಿ ದಂಡ ಕಟ್ಟಬಹುದೇ ಎಂದು ಟ್ವೀಟ್ ಮೂಲಕ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾನೆ.
ಈ ಕುರಿತು ಪ್ರತಿಕ್ರಿಯಿಸಿದ ಸಂಚಾರ ಪೊಲೀಸರು, ನೋಟಿಸ್ ಕಳುಹಿಸಿದ ಬಳಿಕ ದಂಡ ಪಾವತಿಸುವಂತೆ ಸೂಚಿಸಿದ್ದಾರೆ.
Dear @blrcitytraffic,
— Bal Krishn Birla (@bkbirla) September 28, 2022
I broke a traffic signal near Shanti Nagar Bus Stand by mistake yesterday.
Can I pay my fine proactively?
After getting a traffic rule violation notice you can pay the fine.
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) September 29, 2022
Next Story