ದ.ಕ. ಜಿಲ್ಲೆ: ಪೊಲೀಸ್ ಅಧಿಕಾರಿಗಳ ವರ್ಗಾವಣೆ
ಸಾಂದರ್ಭಿಕ ಚಿತ್ರ
ಮಂಗಳೂರು, ಜ.15: ನಗರ ಪೊಲೀಸ್ ಕಮಿಷನರೇಟ್ ಮತ್ತು ದ.ಕ. ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ ಕೆಲವು ಪೊಲೀಸ್ ಅಧಿಕಾರಿಗಳ ವರ್ಗಾವಣೆಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಡಿಸಿಆರ್ಬಿಯಿಂದ ಡಿವೈಎಸ್ಪಿ ಶಿವಾನಂದ ಹೆಚ್. ಚಲವಾದಿ ಅವರು ಪಶ್ಚಿಮ ವಲಯ ಐಜಿಪಿ ಕಚೇರಿಗೆ ವರ್ಗಾವಣೆಯಾಗಿದ್ದಾರೆ.
ನಗರದ ಕದ್ರಿ ಇನ್ಸ್ಪೆಕ್ಟರ್ ಸವಿತ್ರತೇಜ ಅವರನ್ನು ಸೆನ್ (ಆರ್ಥಿಕ ಮತ್ತು ಸೈಬರ್) ಪೊಲೀಸ್ ಠಾಣೆಗೆ ವರ್ಗಯಿಸಲಾಗಿದೆ. ತೆರವಾದ ಸ್ಥಾನಕ್ಕೆ ಉಡುಪಿ ಸಿಎಸ್ಪಿಯ ಅನಂತ ಪದ್ಮನಾಭ, ಮೂಡುಬಿದಿರೆ ಠಾಣಾ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಸಿಎಸ್ಪಿಗೆ, ಮಧುಸೂದನ್ ಎನ್. ರಾವ್ ಕೊಣಾಜೆ ಠಾಣೆಯಿಂದ ದ.ಕ. ಮಹಿಳಾ ಠಾಣೆಗೆ, ಸುರೇಶ್ ಜಿ. ನಾಯಕ್ ದ.ಕ. ಸೆನ್ ಠಾಣೆಯಿಂದ ಸಿಎಸ್ಪಿಎಗ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
Next Story