ಕೋಟೆಕಾರ್ : ವ್ಯಕ್ತಿ ನಾಪತ್ತೆ
ಮಂಗಳೂರು, ಜ.27: ಕೋಟೆಕಾರ್ ಸಮೀಪದ ಪನೀರ್ ಹಿದಾಯತ್ ನಗರದ ರಹ್ಮತುಲ್ಲಾ ಯಾನೆ ಮುನ್ನಾ (55) ಎಂಬವರು ಜ.1ರಿಂದ ಕಾಣೆಯಾದ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂದು ಬೆಳಗ್ಗೆ 10ಕ್ಕೆ ಮನೆಯಿಂದ ಕೆಲಸಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ರಹ್ಮತುಲ್ಲಾ ಈವರೆಗೂ ಮರಳಿ ಬಂದಿಲ್ಲ ಎಂದು ರಹ್ಮತುಲ್ಲಾರ ಪತ್ನಿ ಸಾಹಿರಾ ಭಾನು ದೂರಿನಲ್ಲಿ ತಿಳಿಸಿದ್ದಾರೆ.
ರಹ್ಮತುಲ್ಲಾ ಬಂದರ್ ಧಕ್ಕೆಯಲ್ಲಿ ಕೆಲಸ ಮಾಡುತ್ತಿದ್ದು, ಅಲ್ಲಿ ವಿಚಾರಿಸಿದಾಗ 12 ಸಾವಿರ ರೂ.ವನ್ನು ಪಡೆದು ಕೊಂಡು ರಹ್ಮತುಲ್ಲಾ ಹೋಗಿದ್ದಾರೆ ಎನ್ನಲಾಗಿದೆ. 5.6 ಅಡಿ ಎತ್ತರದ, ಸಾಧಾರಣ ಶರೀರದ, ಎಣ್ಣೆಕಪ್ಪು ಮೈಬಣ್ಣದ ರಹ್ಮತುಲ್ಲಾರನ್ನು ಕಂಡವರು ಮಾಹಿತಿ ನೀಡುವಂತೆ (ದೂ.ಸಂ: 0824-2466269)ಉಳ್ಳಾಲ ಠಾಣಾಧಿಕಾರಿ ತಿಳಸಿದ್ದಾರೆ.
Next Story