ಉಳ್ಳಾಲ: ವಿವಾಹ ಸಹಾಯಾರ್ಥ ಚೆಕ್ ವಿತರಣೆ
ಉಳ್ಳಾಲ: ಎಸ್ ವೈ ಎಸ್ ತೊಕ್ಕೋಟ್ಟು ಬ್ರಾಂಚ್ ಇದರ ಆಶ್ರಯದಲ್ಲಿ ದಾನಿಗಳಿಗಾಗಿ ಪ್ರಾರ್ಥನಾ ಮಜ್ಲಿಸ್ ಹಾಗೂ ವಿವಾಹ ಸಹಾಯಾರ್ಥ 50 ಸಾವಿರ ರೂ. ಚೆಕ್ ವಿತರಣಾ ಕಾರ್ಯಕ್ರಮವು ಕುಂಪಲ ಎಮ್ ಆರ್, ಪ್ಯಾಲೇಸ್ ನಲ್ಲಿ ಗುರುವಾರ ನಡೆಯಿತು.
ಮುಹಮ್ಮದ್ ಹಾಜಿ ಕುಂಪಲ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
ಅಲ್ ಹಾಜ್ ಯುಡಿ ಹಮೀದ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೂರುಲ್ ಇಸ್ಲಾಂ ಜುಮಾ ಮಸ್ಜಿದ್ ಕುಂಪಲ ಇದರ ಅಧ್ಯಕ್ಷ ಹಾಜಿ ಇಕ್ಬಾಲ್ ಕುಂಪಲ ಚೆಕ್ ವಿತರಣೆ ಮಾಡಿದರು.
ಕಾರ್ಯಕ್ರಮ ದಲ್ಲಿ ಕುಂಪಲ ಮದರಸ ಉಸ್ತುವಾರಿ ಹಾಜಿ ಪಿ ಎಸ್ ಬಾವಾ ಕುಂಪಲ, ಬಶೀರ್ ಫೈಝಿ ತೋಡಾರ್, ಅಬ್ದುಲ್ ಲತೀಫ್ ಕುಂಪಲ, ಎನ್.ಎಂ ಮುಹಮ್ಮದ್ ಇಕ್ಬಾಲ್, ಅಬ್ದುಲ್ ಸಮದ್, ಯು.ಎ. ಮೊಹಮ್ಮದ್, ಬಶೀರ್ ಆಝಾದ್ ನಗರ ಮತ್ತಿತರರು ಉಪಸ್ಥಿತರಿದ್ದರು.
ಅಲ್ತಾPf ಕುಂಪಲ ಸ್ವಾಗತಿಸಿ, ವಂದಿಸಿದರು.
Next Story