ಮಂಗಳೂರು; ಮಹಿಳೆಯ ಜೊತೆ ಅನುಚಿತ ವರ್ತನೆ ಆರೋಪ : ರಿಕ್ಷಾ ಚಾಲಕ ಸೆರೆ
ಸಮೀರ್
ಮಂಗಳೂರು : ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ರಿಕ್ಷಾ ಚಾಲಕನನ್ನು ಉಳ್ಳಾಲ ಪೊಲೀಸರು ಇಂದು ಬಂಧಿಸಿದ್ದಾರೆ.
ಮುನ್ನೂರು ಗ್ರಾಮದ ಸಮೀರ್ (22) ಬಂಧಿತ ಆರೋಪಿ.
ಸೋಮವಾರ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಜೊತೆ ಆರೋಪಿ ಸಮೀರ್ ಅನುಚಿತವಾಗಿ ವರ್ತಿಸಿದ್ದ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ನೊಂದ ಮಹಿಳೆ ಈ ವಿಚಾರವನ್ನು ತನ್ನ ಮಗನ ಬಳಿ ತಿಳಿಸಿದ್ದು, ಅದರಂತೆ ಆತ ರಿಕ್ಷಾ ಚಾಲಕನ ಬಳಿ ವಿಚಾರಿಸಿದಾಗ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಮೀರ್ನನ್ನು ಬಂಧಿಸಲಾಗಿದೆ.
Next Story