ಉದಯಪುರ ಹತ್ಯೆ ಖಂಡನೀಯ : ದ.ಕ. ಜಿಲ್ಲಾ ಫೈಝೀಸ್
ಮಂಗಳೂರು: ರಾಜಸ್ಥಾನದ ಉದಯಪುರದಲ್ಲಿ ಟೈಲರ್ ಒಬ್ಬರನ್ನು ದಾರುಣವಾಗಿ ಹತ್ಯೆಗೈದಿರುವುದು ಅಮಾನುಷ ಮತ್ತು ಖಂಡನೀಯ ಎಂದು ದ.ಕ. ಜಿಲ್ಲಾ ಫೈಝೀಸ್ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರವಾದಿ ನಿಂದನೆ ಅಕ್ಷಮ್ಯ ಅಪರಾಧ, ಅದನ್ನು ಪ್ರತಿಭಟಿಸುವ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ. ಹಿಂಸೆ ಇಸ್ಲಾಮಿನ ಸಿದ್ಧಾಂತವಲ್ಲ. ಪ್ರವಾದಿ ನಿಂದಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡು ಸಮಾಜದಲ್ಲಿ ಸ್ವಾಸ್ಥ್ಯ ಕಾಪಾಡುವ ಹೊಣೆ ಸರ್ಕಾರಕ್ಕಿದೆ. ಅದೇ ರೀತಿ ಸರ್ಕಾರದ ವಿರುದ್ಧ ಧ್ವನಿಯೆತ್ತುವ ಸಾಮಾಜಿಕ ಹೋರಾಟಗಾರರನ್ನು ಬಂಧಿಸುವ ಮೂಲಕ ಸರ್ಕಾರವು ದಮನಿತರ ಧ್ವನಿಯನ್ನು ಅಡಗಿಸುವ ದುಸ್ಸಾಹಸ ನಡೆಸುವುದನ್ನು ಕೈಬಿಡಬೇಕೆಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Next Story