ಕೊಲೆ ಸಂಚು ಪ್ರಕರಣ; ನಟಿ ಅನುಷ್ಕಾ ಶೆಟ್ಟಿ ಸಹೋದರನಿಂದ ಕಮಿಷನರ್ಗೆ ವಿವರಣೆ
ಕಮಿಷನರ್ ಶಶಿಕುಮಾರ್
ಮಂಗಳೂರು: ನಟಿ ಅನುಷ್ಕಾ ಶೆಟ್ಟಿ ಸಹೋದರ ಗುಣರಂಜನ್ ಶೆಟ್ಟಿಯ ಕೊಲೆ ಸಂಚು ಆರೋಪಕ್ಕೆ ಸಂಬಂಧಿಸಿದಂತೆ ಬುಧವಾರ ಗುಣರಂಜನ್ ಅವರು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ರನ್ನು ಭೇಟಿ ಮಾಡಿ ವಿವರಣೆ ನೀಡಿದ್ದಾರೆ.
ಮೊದಲು ಮಂಗಳೂರು ಸಿಸಿಬಿ ಪೊಲೀಸರ ಬಳಿ ವಿವರಣೆ ನೀಡಿದ ಗುಣರಂಜನ್ ಶೆಟ್ಟಿ ಬಳಿಕ ಪೊಲೀಸ್ ಕಮಿಷನರ್ರನ್ನು ಭೇಟಿ ಮಾಡಿ ಕೊಲೆ ಸಂಚು ಆರೋಪಕ್ಕೆ ಸಂಬಂಧಿಸಿಂತೆ ವಿವರಣೆ ನೀಡಿದ್ದಾರೆ.
ಈ ಸಂದರ್ಭ ಭೂಗತ ಪಾತಕಿಗಳ ಬಗ್ಗೆಯೂ ಪೊಲೀಸ್ ಕಮಿಷನರ್ ವಿವರಣೆ ಕೇಳಿದ್ದಾರೆ ಎಂದು ತಿಳಿದು ಬಂದಿದೆ.
Next Story