ಪುತ್ತೂರು: ಆನೆಮಜಲಿನಲ್ಲಿ ಉಬ್ಬಿದ ರಸ್ತೆ !
ಪುತ್ತೂರು: ಮಳೆಗೆ ಬಹುತೇಕ ಕಡೆಗಳಲ್ಲಿ ರಸ್ತೆ ಕುಸಿತ ಉಂಟಾಗುವುದು ಸಾಮಾನ್ಯವಾಗಿದೆ. ಆದರೆ ಪುತ್ತೂರು-ಉಪ್ಪಿನಂಗಡಿ ರಸ್ತೆಯಲ್ಲಿನ ಆನೆಮಜಲು ಎಂಬಲ್ಲಿ ರಸ್ತೆಯು ಮಳೆಗೆ ಉಬ್ಬಿ ಕುತೂಹಲ ಮೂಡಿಸಿದೆ.
ಆನೆಮಜಲು ಎಂಬಲ್ಲಿ ರಸ್ತೆಯ ಭಾಗ ಡಾಂಬರು ಸಹಿತ ಉಬ್ಬಿಕೊಂಡಿದೆ. ರಸ್ತೆಯ ಕೆಳ ಭಾಗದಲ್ಲಿ ನೀರು ಹರಿವು ಹೆಚ್ಚಾಗಿ ಈ ರೀತಿಯಾಗಿ ಉಬ್ಬಿರಬಹುದು ಎಂದು ಅಂದಾಜಿಸಲಾಗಿದೆ.
ಪುತ್ತೂರು-ಉಪ್ಪಿನಂಗಡಿ ದ್ವಿಪಥ ರಸ್ತೆಯು ಕೆಲ ಸಮಯಗಳ ಹಿಂದೆ ನಿರ್ಮಾಣಗೊಂಡಿದ್ದು, ಈ ಭಾಗದಲ್ಲಿ ರಸ್ತೆಯನ್ನು ದುರಸ್ತಿಗೊಳಿಸಿ ಡಾಂಬರೀಕರಣ ಮಾಡಲಾಗಿತ್ತು. ಇದೀಗ ರಸ್ತೆಯ ಭಾಗವು ಉಬ್ಬಿಕೊಂಡಿದೆ. ಅಲ್ಲದೆ ಈ ಭಾಗದಲ್ಲಿ ರಸ್ತೆಯ ಡಾಂಬರು ಎದ್ದು ಹೋಗಿದ್ದು, ಈ ರಸ್ತೆಯಲ್ಲಿ ವಾಹನ ಸಂಚಾರ ನಡೆಸಲು ಭಯ ಪಡುವ ಸ್ಥಿತಿ ನಿರ್ಮಾಣಗೊಂಡಿದೆ.
Next Story