ಮುಲ್ಕಿ; ಗ್ಯಾರೇಜ್ಗೆ ಸ್ಕೂಟರ್ ಢಿಕ್ಕಿ: ಸವಾರನಿಗೆ ಗಂಭೀರ ಗಾಯ
ನೆಲಕ್ಕುರುಳಿದ ಗ್ಯಾರೇಜ್ ನ ಛಾವಣಿ
ಕಿನ್ನಿಗೋಳಿ : ಗ್ಯಾರೇಜ್ ಗೆ ಸ್ಕೂಟರ್ ಢಿಕ್ಕಿ ಹೊಡೆದು ಸವಾರ ಗಂಭೀರ ಗಾಯಗೊಂಡಿರುವ ಘಟನೆ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಪಕ್ಷಿಕೆರೆ ಸಮೀಪದ ಹೊಸಕಾಡು ಎಂಬಲ್ಲಿ ಶುಕ್ರವಾರ ರಾತ್ರಿ ವರದಿಯಾಗಿದೆ.
ಸ್ಕೂಟರ್ ಸವಾರ ಮೂಲತಃ ಮೈಸೂರು ನಿವಾಸಿ ಸದ್ಯ ಪುನರೂರು ಶಾಲೆ ಬಳಿ ವಾಸವಿರುವ ಶಿವು ಎಂಬವರ ತಲೆಗೆ ಗಾಯಗಳಾಗಿದೆ. ಸ್ಥಳೀಯರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಶಿವು ಅವರು ಪಕ್ಷಿಕೆರೆ ಕಡೆಯಿಂದ ಪುನರೂರಿನ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದ್ದು, ಶಿವ ಪಾನಮತ್ತರಾಗಿ ಸ್ಕೂಟರ್ ಚಲಾಯಿಸಿದ ಪರಿಣಾಮ ನಿಯಂತ್ರಣ ಕಳೆದುಕೊಂಡ ಸ್ಕೂಟರ್ ಹೊಸಕಾಡುವಿನಲ್ಲಿರುವ ಕರ್ಣ ಎಂಬವರಿಗೆ ಸೇರಿದ ಗ್ಯಾರೇಜ್ ಗೆ ಢಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಹಿತಿ ನೀಡಿದ್ದಾರೆ.
ಢಿಕ್ಕಿಯ ರಭಸಕ್ಕೆ ಗ್ಯಾರೇಜ್ ನ ಕಂಬ ಮುರಿದು ಛಾವಣಿ ನೆಲಕ್ಕುರುಳಿದ್ದು, ಅಪಾರ ನಷ್ಟವಾಗಿರುವುದಾಗಿ ದೂರಲಾಗಿದೆ.
Next Story