ಹೆದ್ದಾರಿ ಹೊಂಡ ಮುಚ್ಚಿಸಿ ಜೀವ ಉಳಿಸಿ: ಎಂ.ಪಿ.ಮೊದಿನಬ್ಬ
ಉಡುಪಿ : ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಾದ್ಯಂತ ಭಾರೀ ಪ್ರಮಾಣದ ಹೊಂಡಗಳು ಉಂಟಾಗಿದ್ದು, ಈ ಮಳೆಗಾಲ ಆರಂಭ ದಿಂದ ಈವರೆಗೆ ಹಲವಾರು ಅಪಘಾತಗಳು ನಡೆದಿವೆ. ಹೆಚ್ಚಿನ ಅಪಘಾತಗಳಲ್ಲಿ ಸಾವು ನೋವಾಗಿದ್ದು, ಕೂಡಲೇ ಈ ಹೊಂಡಗಳನ್ನು ಮುಚ್ಚಿಸಿ ಅಮಾಯಕ ವಾಹನ ಸವಾರರ ಜೀವ ರಕ್ಷಿಸುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ವಿಭಾಗದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಉಡುಪಿ ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ.
ರಸ್ತೆಯಾದ್ಯಂತ ಇರುವ ಹೊಂಡಗಳನ್ನು ದಿನ ನಿತ್ಯ ನೋಡಿಯೂ ಮೂಖ ರಾಗಿರುವ ಜನಪ್ರತಿನಿಧಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವರ್ತನೆ ಖಂಡನೀಯ. ಟೋಲ್ ಪಾವತಿಸಿಯೂ ಜನ ಸಾಮಾನ್ಯರ ಜೀವ ದೊಂದಿಗೆ ಚೆಲ್ಲಾಟವಾಡುತ್ತಿರುವುದು ದುರಾದೃಷ್ಟಕರ ಎಂದು ಅವರು ಪ್ರಕಟಣೆ ಯಲ್ಲಿ ಟೀಕಿಸಿದ್ದಾರೆ.
Next Story