ಕೊಲೆಯಾದ ಫಾಝಿಲ್ ಕುಟುಂಬಕ್ಕೆ ಬಜ್ಪೆ ಜಮಾಅತ್ ವತಿಯಿಂದ ಪರಿಹಾರ ವಿತರಣೆ
ಮಂಗಳೂರು : ಸುರತ್ಕಲ್ನಲ್ಲಿ ನಡೆದ ಮಂಗಳಪೇಟೆಯ ಕೊಲೆಯಾದ ಫಾಝಿಲ್ ಕುಟುಂಬಕ್ಕೆ ಬಜ್ಪೆ ಎಂಜೆಎಂ ಜಮಾಅತ್ ವತಿಯಿಂದ 1.20 ಲಕ್ಷ ರೂ. ಪರಿಹಾರ ಧನವನ್ನು ಶನಿವಾರ ವಿತರಿಸಲಾಯಿತು.
ಬಜ್ಪೆ ಮುಹಿಯ್ಯದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್ರ ನೇತೃತ್ವದಲ್ಲಿ ಫಾಝಿಲ್ನ ಮನೆಗೆ ತೆರಳಿದ ಬಜ್ಪೆ ಜಮಾಅತ್ನ ನಿಯೋಗವು ಫಾಝಿಲ್ರ ಮಗ್ಫಿರತ್ಗಾಗಿ ಪ್ರಾರ್ಥಿಸಿ ಕುಟುಂಬಕ್ಕೆ ಪರಿಹಾರವನ್ನು ವಿತರಿಸಿತು.
ಫಾಝಿಲ್ ಮನೆಗೆ ಭೇಟಿ ನೀಡಿದ ನಿಯೋಗದಲ್ಲಿ ಖತೀಬ್ ಮೌಲಾನಾ ಮನ್ಸೂರ್ ಸಅದಿ, ಪ್ರಧಾನ ಕಾರ್ಯದರ್ಶಿ ಹುಸೇನ್ ಸಿರಾಜ್, ಉಪಾಧ್ಯಕ್ಷರಾದ ಹನೀಫ್, ಅಜ್ಮಲ್ ಅಲಿ, ಇಸ್ಮಾಯಿಲ್ ಜಾವಲಿ, ಹಮೀದ್ ಜರಿ, ಅಬೂಬಕ್ಕರ್, ಇಬ್ರಾಹಿಂ ಹಾಜಿ, ಇಸ್ಮಾಯಿಲ್ ಮತ್ತಿತರರು ಉಪಸ್ಥಿತರಿದ್ದರು.
ಶೀಘ್ರದಲ್ಲೇ ಬೆಳ್ಳಾರೆಯ ಮಸೂದ್ರ ಮನೆಗೂ ತೆರಳಿ 1.20 ಲಕ್ಷ ರೂ. ಪರಿಹಾರ ಧನವನ್ನು ವಿತರಿಸಲಾಗುವುದು ಎಂದು ಮಸೀದಿಯ ಆಡಳಿತ ಸಮಿತಿ ತಿಳಿಸಿದೆ.
Next Story