ಉಳ್ಳಾಲ: ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಭಾವೈಕ್ಯತಾ ಸಂಕಲ್ಪ ಸಮಾವೇಶ
ಉಳ್ಳಾಲ: ಸ್ವಾತಂತ್ರ್ಯ ಸುಲಭದಲ್ಲಿ ನಮಗೆ ಸಿಕ್ಕಿಲ್ಲ ಬ್ರಿಟಿಷರ ವಿರುದ್ಧ ಹೋರಾಡಿ ಪಡೆದ ಸ್ವಾತಂತ್ರ್ಯ ಮಧ್ಯ ರಾತ್ರಿ ಸಿಕ್ಕಿದೆ. ಈ ದೇಶದಲ್ಲಿ ಜಾತಿ, ಧರ್ಮ ಅಂತರ ಇಲ್ಲದೇ ಬದುಕುವ ಅವಕಾಶ ನಮಗೆ ಸಿಗಬೇಕಾಗಿದೆ ಎಂದು ಇಬ್ರಾಹಿಂ ಫೈಝಿ ಹೇಳಿದರು.
ಅವರು ಐಕ್ಯತಾ ವೇದಿಕೆ ಉಚ್ಚಿಲ ಇದರ ಆಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಉಚ್ಚಿಲ ದಲ್ಲಿ ನಡೆದ ಭಾವೈಕ್ಯತಾ ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ರಹ್ಮಾನಿಯ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಅಬ್ಬಾಸ್ ಹಾಜಿ, ಮಜಲ್ ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದರು. ಇಬ್ರಾಹಿಂ ಫೈಝಿ ದುಆ ನೆರವೇರಿಸಿದರು. ಅಬ್ದುಲ್ ರಶೀದ್ ಝೈನಿ ದಿಕ್ಸೂಚಿ ಭಾಷಣ ಮಾಡಿದರು.
ವಕೀಲ ಅರುಣ್ ಬಂಗೇರ, ಚಂದ್ರ ಶೇಖರ ಉಚ್ಚಿಲ, ಎಂ.ಜಿ. ಮೋಹನ್, ಅಬ್ಬಾಸ್ ಜಿ.ಉಚ್ಚಿಲ, ಬಶೀರ್ ಜುಬೈಲ್, ಇಕ್ಬಾಲ್ ಜುಬೈಲ್, ರಾಜೇಶ್ ಉಚ್ಚಿಲ, ಉಳ್ಳಾಲ ಇನ್ಸ್ಪೆಕ್ಟರ್ ಸಂದೀಪ್, ಆಸೀಫ್ ಅಡ್ವೊಕೇಟ್ ಮುಜಾಫರ್ ಅಹ್ಮದ್ ಉಪಸ್ಥಿತರಿದ್ದರು.
ಝೈನುದ್ದೀನ್ ನವಾಝ್ ಸ್ವಾಗತಿಸಿದರು. ಸಲಾಂ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.