ಬೇಕಲ ಉಸ್ತಾದ್ ರ ಎರಡನೇ ಆಂಡ್ ನೇರ್ಚೆ ಸಮಾರೋಪ
ಕೊಣಾಜೆ : ಮರಿಕ್ಕಳ ಜುಮಾ ಮಸೀದಿ ಮೊಂಟೆಪದವು ಇದರ ಆಶ್ರಯದಲ್ಲಿ ಶೈಖುನಾ ತಾಜುಲ್ ಫುಖಹಾಹ್ ಬೇಕಲ ಉಸ್ತಾದ್ ರವರ ಎರಡನೇ ಆಂಡ್ ನೇರ್ಚೆ ಹಾಗೂ ಸ್ವಲಾತ್ ವಾರ್ಷಿಕ ಕಾರ್ಯಕ್ರಮದ ಸಮಾರೋಪ ರವಿವಾರ ನಡೆಯಿತು.
ಕೂರತ್ ತಂಙಳ್ ಹಾಗೂ ಸೆಯ್ಯದ್ ಸಾದಾತ್ ತಂಙಳ್ ಪಡ್ಡಂಡ್ಕ ನೇತೃತ್ವದಲ್ಲಿ ದ್ಸಿಕ್ರ್ ಮಜ್ಲಿಸ್, ಮೌಲಿದ್ ಪಾರಾಯಣ ನಡೆಯಿತು. ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಹುಸೈನ್ ಸಅದಿ ಕೆಸಿರೋಡ್, ಇಸ್ಮಾಯಿಲ್ ಸಅದಿ ಉರುಮಣೆ, ಅಬ್ಬಾಸ್ ಸಖಾಫಿ ಪೂಡಲ್ , ಸಿದ್ದೀಕ್ ಸಅದಿ, ಮುಹಿಯ್ಯದ್ದೀನ್ ಸಅದಿ, ಉಸ್ಮಾನ್ ಸ ಅದಿ,ವಿ ಎ. ಮುಹಮ್ಮದ್ ಸಖಾಫಿ ವಳವೂರು, ಎಸ್ ಕೆ ಖಾದರ್ ಹಾಜಿ ಮರಿಕ್ಕಳ ಮಸೀದಿ ಅಧ್ಯಕ್ಷ ಅಬ್ಬಾಸ್ ಕೊಡಂಚ್ಚಿಲ್, ಹನೀಫ್ ಶೈನ್ ಚಂದ ಹಿತ್ಲು, ಎನ್ ಎಸ್ ಕರೀಂ, ಮುಹಮ್ಮದ್ ಶಾಲಿ, ಆಲಿಕುಂಞಿ, ಬಶೀರ್ ಮಜಲ್, ಹಮೀದ್ ಎಂ, ಅಬ್ದುಲ್ ರಹಿಮಾನ್ ಚಂದಹಿತ್ಲು ಉಪಸ್ಥಿತರಿದ್ದರು.
ಜಲೀಲ್ ಮೊಂಟುಗೋಳಿ ಸ್ವಾಗತಿಸಿದರು.ಇಸ್ಮಾಯಿಲ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.
Next Story