ದ.ಕ.ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ಚುನಾವಣೆ
ಮಂಗಳೂರು, ಸೆ.25: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ (ರಿ) ಬೆಂಗಳೂರು ಇದರ ಅಧೀನದಲ್ಲಿರುವ ದ.ಕ. ಜಿಲ್ಲಾ ವಿದ್ಯುತ್ ಗುತ್ತಿಗೆದಾರರ ಸಂಘಕ್ಕೆ ನಗರದ ಮಲ್ಲಿಕಟ್ಟೆಯ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ಚುನಾವಣೆ ನಡೆಯಿತು.
2022-25ನೆ ಸಾಲಿನ ಜಿಲ್ಲಾ ಸಮಿತಿಯ ಆಡಳಿತ ಮಂಡಳಿಯ ಚುನಾವಣೆಯಲ್ಲಿ ರಾಜ್ಯದ ಆರ್ಆರ್ ತಂಡದ ಬೆಂಬಲದಲ್ಲಿ ಕುಶಾಲ್ ಪೂಜಾರಿ ನೇತೃತ್ವದ ತಂಡ ಜಯಗಳಿಸಿದೆ.
ಸಂಘದ ಅಧ್ಯಕ್ಷರಾಗಿ ಕುಶಾಲ್ ಪೂಜಾರಿ ಕಿನ್ನಿಗೋಳಿ, ಉಪಾಧ್ಯಕ್ಷರಾಗಿ ರವಿಪ್ರಸಾದ್ ಶೆಟ್ಟಿ ಮೂಡುಬಿದಿರೆ, ಲಕ್ಷ್ಮಿನಾರಾಯಣ ಅಡ್ಯಂತಾಯ ವಿಟ್ಲ, ಪ್ರಧಾನ ಕಾರ್ಯದರ್ಶಿಯಾಗಿ ಸುಶೀಲ್ ನೊರೊನ್ಹ ಮಂಗಳೂರು, ಜಂಟಿ ಕಾರ್ಯದರ್ಶಿಯಾಗಿ ಪುರುಷೋತ್ತಮ ಪಿ. ಉಳ್ಳಾಲ, ಸಂಘಟನಾ ಕಾರ್ಯದರ್ಶಿಯಾಗಿ ಯೂಸುಫ್ ಎನ್.ಪಿ. ಬಂಟ್ವಾಳ, ಕೋಶಾಧಿಕಾರಿಯಾಗಿ ಎಸ್ ಪ್ರವೀಣ್ ಮಂಗಳೂರು ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಂಟೋನಿ ಫೆರ್ನಾಂಡಿಸ್, ಚರಣ್ ಕುಮಾರ್, ಗೋಪಾಲ, ಹೈದರ್ ಎಚ್ಎ, ಮಾಯಿಲಪ್ಪ ಗೌಡ, ರಘುಪತಿ ನಾಯಕ್, ರಾಮ, ರವೀಂದ್ರ ಸಪಲ್ಯ, ಸಂಜೀವ ಎಜಿ, ಸುಬ್ರಾಯ ಗೌಡ, ವಾಸುದೇವ ಗೌಡ, ಯಶೋಧರ, ನವೀನ್ ಕುಮಾರ್ ಆಯ್ಕೆಯಾಗಿದ್ದಾರೆ.