ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಸಭೆ
ಸುರತ್ಕಲ್, ಸೆ. 25: ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಮತ್ತು ಕಾರ್ಯಕರ್ತರ ಸಭೆಯು ಕಾವೂರು ಶ್ರೀ ಗುರು ವೈದ್ಯನಾಥ ಬಬ್ಬುಸ್ವಾಮಿ ದೈವಸ್ಥಾನದ ಸಭಾಂಗಣದಲ್ಲಿ ರವಿವಾರ ಜರುಗಿತು.
ಸಭೆಯ ಅಧ್ಯಕ್ಷತೆಯನ್ನು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ ವಹಿಸಿದ್ದರು.
ಸಮಾಜ ಸೇವೆಗಾಗಿ 'ಹೃದಯವಂತೆ' ಪ್ರಶಸ್ತಿ ಪಡೆದ ಡಾ.ಸಂಶಾದ್ ಕುಂಜತ್ತಬೈಲ್ ಅವರನ್ನು ಇದೇ ಸಂದರ್ಭದಲ್ಲಿ ಅಭಿನಂದಿಸಿ ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಾಜಿ ಮಹಾಪೌರರಾದ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಎಮ್. ಹರಿನಾಥ್, ಮ.ನ.ಪಾ. ಸದಸ್ಯ ಅನಿಲ್ ಕುಮಾರ್, ಮಾಜಿ ಉಪ ಮಹಾಪೌರರಾದ ಕೆ. ಮಹಮ್ಮದ್, ಬಶೀರ್ ಬೈಕಂಪಾಡಿ, ಪುರುಷೋತ್ತಮ ಚಿತ್ರಾಪುರ, ಪಕ್ಷದ ಮುಖಂಡರಾದ ಸದಾಶಿವ ಶೆಟ್ಟಿ, ನೀರಜ್ ಪಾಲ್, ಬಿ.ಕೆ ತಾರನಾಥ್, ರಾಜೇಶ್ ಕುಳಾಯಿ, ಬ್ಲಾಕ್ ಮುಂಚೂಣಿ ಘಟಕಗಳ ಅಧ್ಯಕ್ಷರಾದ ಥೋಮಸ್ ಡೇಸಾ, ಮುಹಮ್ಮದ್ ಶಮೀರ್, ಶಶಿಕಲಾ ಪದ್ಮನಾಭ, ಚಂದ್ರಹಾಸ ಪೂಜಾರಿ, ಮಲ್ಲಿಕಾರ್ಜುನ, ಜೈಸನ್ ಸುರತ್ಕಲ್, ವಾರ್ಡ್ ಅಧ್ಯಕ್ಷರು ಮೊದಲಾದವರು ಉಪಸ್ಥಿತರಿದ್ದರು.
ರಹ್ಮಾನ್ ಖಾನ್ ಕುಂಜತ್ತಬೈಲ್ ಕಾರ್ಯಕ್ರಮ ನಿರೂಪಿಸಿದರು